ಬೆಂಗಳೂರು: ನಗರದಲ್ಲಿ ಕ್ಯಾನ್ಸರ್ ಗೆ ಕಾನ್ಸ್ ಟೇಬಲ್ ಬಲಿಯಾಗಿರುವ ಘಟನೆ ನಡೆದಿದೆ.
ಸಿಟಿ ಮಾರ್ಕೇಟ್ ಸಂಚಾರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಂಗಾರಿ ಕ್ಯಾನ್ಸರ್ ಮಹಾಮಾರಿಗೆ ಬಲಿಯಾಗಿರುವ ಕಾನ್ಸ್ ಟೇಬಲ್ ಎನ್ನಲಾಗಿದೆ. ಮೃತ ಕಾನ್ಸ್ ಟೇಬಲ್ ಬಂಗಾರಿ ಹಲವಾರು ವರ್ಷಗಳಿಂದ ಸಿಟಿ ಮಾರುಕಟ್ಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಜನರಿಗೆ ಹಾಗೂ ಜನ ಸಾಮಾನ್ಯರಿಗೆ ಜನ ಸ್ನೇಹಿ ಆಗಿದ್ದರು. ಆದರೆ, ದುರ್ವಿಧಿಯ ಇಚ್ಛೆಯೇ ಬೇರೆ ಇದೆ. ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಆದರೆ, ಇಂದು ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ. ಬಂಗಾರಿ ಸಾವಿಗೆ ಪೊಲೀಸ್ ಇಲಾಖೆ ಕಂಬನಿ ಮಿಡಿದಿದೆ.