ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಹಗಲು ದರೋಡೆ ಮಾಡುತ್ತಿದೆ. ನೇರವಾಗಿ ಜನರ ಜೇಬಿನಿಂದಲೇ ಲೂಟಿ ಮಾಡುತ್ತಿದೆ ಎಂದು ಮಾಜಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಕಿಡಿಕಾರಿದ್ದಾರೆ.
ಕಾಂಗ್ರೆಸ್ ನಾಯಕರ ನಿವಾಸದ ಮೇಲೆ ಇಡಿ ದಾಳಿ ನಡೆಸಿರುವ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಚಂದ್ರಶೇಖರ ಆತ್ಮಹತ್ಯೆ ನಂತರ ಇದೆಲ್ಲ ಬಯಲಾಗಿದೆ. ಕಾಂಗ್ರೆಸ್ ಸರ್ಕಾರ ಇದೆಲ್ಲವನ್ನ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ. ಜವಾಬ್ದಾರಿಯಿಂದ ಕಾನೂನು ಕ್ರಮವನ್ನು ತಡೆ ಹಿಡಿಯುವ ಕೆಲಸ ಮಾಡುತ್ತಿದೆ. ವಾಲ್ಮೀಕಿ ಹಣ, ತೆಲಂಗಾಣ ಎಲೆಕ್ಷನ್, ಲೋಕಸಭಾ ಚುನಾವಣೆಗೆ ಬಳಕೆ ಆಗಿದೆ. ಖುದ್ದು ಸಿಎಂ 137 ಅಲ್ಲ 87 ಕೋಟಿ ಅಂತಾ ಒಪ್ಪಿಕೊಂಡಿದ್ದಾರೆ.
ಈಗ ಇಡಿ ದಾಳಿ ಆಗಿರುವುದರಿಂದ ಆ ತನಿಖೆಯಿಂದ ಸತ್ಯ ಹೊರ ಬರಬೇಕಿದೆ. ಎಲ್ಲ ನಿಯಮ, ಪ್ರಾಧಿಕಾರದಿಂದ ಸರ್ಕಾರ ದುಡ್ಡು ಮಾಡುತ್ತಿರುವುದು ಕಾಣಿಸುತ್ತಿದೆ. ಇದು ರಾಜಕೀಯ ಪ್ರೇರಿತ ಅನ್ನುವ ಪ್ರಶ್ನೆಯೇ ಇಲ್ಲ. ಇವೆಲ್ಲ ಸಿಎಂ ಸಹಾಕರ ಇಲ್ಲದೆ ನಡೆಯುವುದಿಲ್ಲ ಎಂದು ಆರೋಪಿಸಿದ್ದಾರೆ.
ತನಿಖೆ ಮಾಡುವುದಕ್ಕೆ ಇನ್ನೊಂದೆರಡು ಡಿಪಾರ್ಮೆಂಟ್ ನೇಮಕ ಮಾಡಬೇಕು ಅನಿಸುತ್ತಿದೆ. ರೇಷನ್, ಬಿಸಿಯೂಟ ಸೇರಿದಂತೆ ಎಲ್ಲದರಲ್ಲೂ ಹಗರಣ ನಡೆಯುತ್ತಿದೆ. ಕಾಲ್ತುಳಿತ ಪ್ರಕರಣದ ದಾರಿ ತಪ್ಪಿಸುವುದಕ್ಕೆ ಈಗ ಕಾಂಗ್ರೆಸ್ ಬೇರೆ ಬೇರೆ ನಾಟಕವಾಡುತ್ತಿದೆ ಎಂದಿದ್ದಾರೆ.