ಮಂಡ್ಯ : ಜೂನ್ ತಿಂಗಳಲ್ಲೇ ತುಂಬಿದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿನ ಕೆಆರ್ ಎಸ್ ಡ್ಯಾಂಗೆ ಸಿಎಂ ಸಿದ್ದರಾಮಯ್ಯ ಅವರು ಜೂ. 30ರಂದು ಬಾಗಿನ ಅರ್ಪಿಸುತ್ತಿರುವ ಹಿನ್ನೆಲೆಯಲ್ಲಿ ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಸಿ.ಎಂ.ಆಗಮನದ ಹಿನ್ನಲೆಯಲ್ಲಿ KRS ನಲ್ಲಿ ಕಾರ್ಯಕ್ರಮಕ್ಕೆ ಭರದ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. KRS ಡ್ಯಾಂಮ್ ಮೇಲ್ಭಾಗದಲ್ಲಿ ಸಿಬ್ಬಂದಿಗಳು ಸುಣ್ಣಬಣ್ಮ ಬಳಿದು ಶೃಂಗಾರ ಮಾಡಿದ್ದಾರೆ. ಡ್ಯಾಂ ಕೆಳಗಿನ ಕಾವೇರಿ ಮಾತೆ ಪ್ರತಿಮೆ ಮುಂಭಾಗ ಸಿ.ಎಂ.ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಹೀಗಾಗಿ ಕಾವೇರಿ ನೀರಾವರಿ ನಿಗಮದಿಂದ ಸ್ಥಳದಲ್ಲಿ ಭರದ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಪೊಲೀಸರು ಕಾರ್ಯಕ್ರಮ ನಡೆಯುವ ಸ್ಥಳ ಪರಿಶೀಲನೆ ನಡೆಸುತ್ತದ್ದಾರೆ.