ನನ್ನ ಆರೋಗ್ಯ ಈಗ ಪರವಾಗಿಲ್ಲ. ಕಾಲು ಶೇ. 90ರಷ್ಟು ಗುಣಮುಖವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲದ ಅದ್ದಿಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಜಾತಿಗಣತಿ ಜಾರಿಗೆ ಸ್ವಪಕ್ಷಿಯರ ವಿರೋಧದ ವಿಚಾರವಾಗಿ ಮಾತನಾಡಿದರು. ನ್ಯೂನತೆಗಳು ಇದ್ದರೆ ಸರಿಪಡಿಸ್ತೀವಿ ಅಂತಾ ಹೇಳಿದ್ದೀವಿ. ಇನ್ನೂ ಯಾರು ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಮುಂದಿನ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಅಭಿಪ್ರಾಯ ತಿಳಿಸಲು ಹೇಳಿದ್ದೇವೆ. ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಮಾಡ್ತಿವಿ. ಜನಸಂಖ್ಯೆ ಕಡಿಮೆ ಅಥವಾ ಹೆಚ್ಚಾಗಿರುವುದು ಸರ್ವೇ ಮೂಲಕ ಗೊತ್ತಾಗತ್ತೆ ಎಂದು ಹೇಳಿದ್ದಾರೆ.
ಜಯಪ್ರಕಾಶ್ ಹೆಗ್ಡೆ ಮಾಡಿದ್ದವ್ರು ಯಾವ ಪಾರ್ಟಿಯವ್ರು? ಬಿಜೆಪಿಯವ್ರು ನೇಮಕ ಮಾಡಿದ ಅಧ್ಯಕ್ಷನೆ ಕೊಟ್ಟಂತ ರಿಪೋರ್ಟ್. ಅವರೇ ಕೊಟ್ಟ ಅಂಕಿ ಅಂಶ ಅದು ಎಂದಿದ್ದಾರೆ.
ಅಲ್ಲದೇ, ವಿಂಗ್ ಕಮಾಂಡರ್ ಹಲ್ಲೆ ವಿಚಾರವಾಗಿ ಮಾತನಾಡಿದ ಅವರು, ಕಾನೂನು ರೀತಿ ಕ್ರಮ ತೆಗೆದುಕೊಳ್ಳಲು ತಿಳಿಸಿದ್ದೇನೆ. ವಿಂಗ್ ಕಮ್ಯಾಂಡರ್ ಆದರೂ ಸರಿ. ಬೇರೆ ಯಾರೇ ಆದರೂ ಸರಿ. ಕಾನೂನು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ. ಈ ಪ್ರಕರಣದಲ್ಲಿ ಇಬ್ಬರು ದೂರು ಕೊಟ್ಟಿದ್ದಾರೆ ಎಂದಿದ್ದಾರೆ.
ಉತ್ತರ ಭಾರತೀಯರಿಂದ ಭಾಷೆ ವಿಚಾರದಲ್ಲಿ ದಬ್ಬಾಳಿಕೆ ವಿಚಾರವಾಗಿ ಮಾತನಾಡಿದ ಅವರು, ಹಿಂದಿ ಹೇರಿಕೆಗೆ ನಾವು ಬಿಡೋದಿಲ್ಲ. ಕೇಂದ್ರ ಸರ್ಕಾರ ಹಿಂದಿ ಏರಿಕೆ ಮಾಡಿದರೆ, ಒಪ್ಪ ಅಂತ ಈಗ ಹೇಳಿದ್ದೀವಿ. ಇದು ರಾಜ್ಯ ಸರ್ಕಾರದ ಸ್ಟ್ಯಾಂಡ್. ಈಗ ದ್ವಿಭಾಷ ನೀತಿ ಜಾರಿಯಲ್ಲಿದೆ. ತ್ರಿಭಾಷ ಸೂತ್ರ ಇಲ್ಲಾ. ನಾವು ಕನ್ನಡ ಮತ್ತು ಇಂಗ್ಲಿಷ್ ಅಷ್ಟೆ ಕಲಿಸೋದು ಎಂದಿದ್ದಾರೆ