ಮಂಡ್ಯ: ಟ್ರಾಫಿಕ್ ಪೊಲೀಸರ ಎಡವಟ್ಟಿಗೆ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಗುವಿನ ಕುಟುಂಬಸ್ಥರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. 5 ದಿನಗಳ ಹಿಂದೆ ಮಂಡ್ಯದ ನಂದ ಸರ್ಕಲ್ ಬಳಿ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ತಪಾಸಣೆ ನಡೆಸುತ್ತಿದ್ದ ವೇಳೆ ದಂಪತಿ ಮತ್ತು ಮಗು ಪ್ರಯಾಣಿಸುತ್ತಿದ್ದ ಬೈಕ್ ನ್ನು ಸವಾರ ಹೆಲ್ಮೆಟ್ ಧರಿಸಿಲ್ಲ ಎಂದು ಪೊಲೀಸರು ತಪಾಸಣೆಗಾಗಿ ತಡೆದಿದ್ದರು. ಈ ವೇಳೆ ಪೋಷಕರು ಮಗುವಿಗೆ ನಾಯಿ ಕಚ್ಚಿದ್ದು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇವೆ ಎಂದಾಗ ಪೊಲೀಸರು ಬಿಟ್ಟಿದ್ದಾರೆ.
ಆದರೆ, ಬೈಕ್ ಸವಾರ ಕೊಂಚ ಮುಂದಕ್ಕೆ ಹೋಗುತ್ತಲೇ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಮತ್ತೊಂದು ವಾಹನ ಅವರಿಗೆ ಟಚ್ ಆಗಿದೆ. ಬೈಕ್ ಸವಾರ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದು, ಮಗು ಕೂಡ ಕೆಳಗೆ ರಸ್ತೆ ಮೇಲೆ ಬಿದ್ದಿದೆ. ಹಿಂಬದಿಯಿಂದ ಬಂದ ಟೆಂಪೋ ಮಗು ಮೇಲೆ ಹರಿದಿದ್ದು, ರಿತಿಕ್ಷಾ ಎಂಬ 3 ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಸಾಂತ್ವನ ಹೇಳಿರುವ ವಿಜಯೇಂದ್ರ, ವೈಯಕ್ತಿಕವಾಗಿ ನೆರವು ಕಲ್ಪಿಸಿದ್ದಾರೆ.