ಕನ್ನಡದ ಬಿಗ್ ಬಾಸ್ ಸೀಸನ್ 11 ರ ಸ್ಪರ್ಧಿ ಚೈತ್ರಾ ಕುಂದಾಪುರ ಮದುವೆ ಫಿಕ್ಸ್ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈಗ ಚೈತ್ರ ಕುಂದಾಪುರ, ಮಜಾ ಟಾಕೀಸ್ ನಲ್ಲಿ ತಮ್ಮ ಮದುವೆ ವಿಷಯವನ್ನು ರಿವೀಲ್ ಮಾಡಿದ್ದಾರೆ.
ಮಜಾ ಟಾಕೀಸ್ ಶೋನಲ್ಲಿ ಸೃಜನ್ ಲೋಕೇಶ್, ಚೈತ್ರ ಕುಂದಾಪುರ ಅವರಿಗೆ ಮದುವೆ ಫಿಕ್ಸ್ ಆಗಿದೆಯಂತೆ ಹೌದಾ? ಎನ್ನುತ್ತ ಮಾತು ಆರಂಭಿಸಿದರು. ಲವ್ ಮ್ಯಾರೇಜಾ ಅಥವಾ ಅರೆಂಜ್ ಮ್ಯಾರೇಜಾ ಅಂತ ಸೃಜನ್ ಪ್ರಶ್ನೆ ಮಾಡಿದಾಗ ಉತ್ತರ ಸಿಕ್ಕಿದೆ.
ಆಗ ಚೈತ್ರ, ಹೌದು ಅಂತ ಹೇಳಿ ಕಾಲೇಜಿನಲ್ಲಿ ಲವ್ ಸ್ಟೋರಿ ಶುರುವಾಗಿದೆ ಅಂತ ಸುಳಿವು ನೀಡಿದ್ದಾರೆ. ಚೈತ್ರಾ ಮದುವೆ ಆಗುವ ಹುಡುಗನನ್ನು ಬಿಗ್ ಬಾಸ್ ಸ್ಪರ್ಧಿಗಳು ನೋಡಿದ್ದಾರೆ. ಅವರು ತುಂಬಾ ಸಾಫ್ಟ್ ಹಾಗೂ ಕೂಲಾಗಿ ಮಾತನಾಡ್ತಾರೆ. ಚೈತ್ರಾಗೆ ಕಂಪ್ಲೀಟ್ ಆಗಿ ತದ್ವಿರುದ್ಧ ಅಂತ ಧರ್ಮ ಕೀರ್ತಿರಾಜ್ ಹಾಗೂ ಅನುಷಾ ರೈ ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಉಂಗುರ ಮಿಸ್ ಆದಾಗ ಚೈತ್ರ ಅತ್ತಿದ್ದರು. ಆ ವೇಳೆ ಸಾಕಷ್ಟು ಜನ ಚೈತ್ರ ಕುಂದಾಪುರ ಅವರಿಗೆ ಎಂಗೇಜ್ಮೆಂಟ್ ಆಗಿದೆ ಅಂತ ಅಂದುಕೊಂಡಿದ್ದರು. ಆ ಬಗ್ಗೆ ಕಿಚ್ಚ ಸುದೀಪ್ ಪ್ರಶ್ನೆ ಮಾಡಿದಾಗ ಧಾರ್ಮಿಕ ವ್ಯಕ್ತಿ. ಆಧ್ಯಾತ್ಮಿಕದಲ್ಲಿ ನಂಬಿಕೆ ಇರುವ ವ್ಯಕ್ತಿ ಬೇಕು. ಅಮ್ಮನಿಗೆ ಒಳ್ಳೆಯ ಮಗ ಆಗಿರಬೇಕು. ಮದುವೆಯಾಗುವ ಹುಡುಗನ ಬಗ್ಗೆ ಹೆಚ್ಚಿನ ನಿರೀಕ್ಷೆ ಇಲ್ಲ ಆಂತಾ ಚೈತ್ರಾ ಹೇಳಿದ್ದರು. ಈಗ ಆ ಕುರಿತು ಪಕ್ಕಾ ಮಾಹಿತಿ ಸಿಕ್ಕಿದೆ. ಅಭಿಮಾನಿಗಳು ಆದಷ್ಟು ಬೇಗ ಚೈತ್ರಾ ಮದುವೆಯಾಗಲಿ ಎಂದು ಹಾರೈಸುತ್ತಿದ್ದಾರೆ.