ಬಿಜೆಪಿಯಿಂದ ಉಚ್ಛಾಟನೆಗೊಂಡ ಶಾಸಕರು ಮುಂಬರೋ ಮುಂಗಾರು ಅಧಿವೇಶನದಲ್ಲಿ ಭಾಗಿಯಾಗಬಹುದಾ. ಈ ಪ್ರಶ್ನೆಗೆ ನಿಮ್ಮ ಕರ್ನಾಟಕ ನ್ಯೂಸ್ ಬೀಟ್ ಸ್ಪಷ್ಟ ಉತ್ತರ ನೀಡ್ತಿದೆ. ಬಿಜೆಪಿಯಿಂದ ಉಚ್ಛಾಟನೆಗೊಂಡ ಬಸನಗೌಡ ಪಾಟೀಲ್ ಯತ್ನಾಳ್, ಎಸ್ ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಮುಂಬರೋ ಅಧಿವೇಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಈಗಾಗಲೇ ಈ ಮೂವರಿಗೆ ಅಧಿವೇಶನದಲ್ಲಿ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗ್ತಿದೆ. ಈ ಬಗ್ಗೆ ಕರ್ನಾಟಕ ನ್ಯೂಸ್ ಬೀಟ್ ಜೊತೆ ಮಾತನಾಡಿರುವ ವಿಧಾನಸಭಾ ಕಾರ್ಯದರ್ಶಿ ಕಚೇರಿ ಮೂಲಗಳು, ಪ್ರತ್ಯೇಕ ಆಸನದ ವಿಚಾರವನ್ನು ದೃಢಪಡಿಸಿವೆ. ಪಕ್ಷದಿಂದ ಉಚ್ಠಾಟನೆಯಾದ್ರೂ ಈ ಮೂವರ ಶಾಸಕತ್ವ ಅಬಾಧಿತವಾಗಿರಲಿದೆ. ಹೀಗಾಗಿ ಈ ಮೂವರು ಅಧಿವೇಶನದಲ್ಲಿ ಬಿಜೆಪಿಯೇತರರಾಗಿ ಪ್ರತ್ಯೇಕ ಆಸನದಲ್ಲಿ ಆಸೀನರಾಗಲಿದ್ದಾರೆ.