ಉಡುಪಿ ಜಿಲ್ಲೆಯ ಬೆಂದೂರಿನಲ್ಲಿ ಮೇ 2ರಂದು ಮಹತೋಭಾರ ಸೇನೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವ ನಡೆಯಲಿದೆ.
ಏ. 26ರಿಂದಲೇ ಜಾತ್ರಾ ಕೈಂಕರ್ಯಗಳು ಆರಂಭಗೊಂಡಿವೆ. ಏ. 26ರಂದು ಧ್ವಜಾರೋಹಣದಿಂದ ಕಾರ್ಯಕ್ರಮ ಆರಂಭವಾಗಿದೆ. ಮೇ 4ರಂದು ಧ್ವಜಾವರೋಹಣದವರೆಗೆ ರಥೋತ್ಸವದ ಅಂಗವಾಗಿ ಉತ್ಸವಗಳು ನಡೆಯಲಿವೆ. ಈ ವೇಳೆ ವಿವಿಧ ವಿಶೇಷ ಪೂಜೆಗಳು ಜರುಗಲಿವೆ.
ರಾಜೇಶ್ ಐತಾಳ್, ದೊಟ್ಟಯ್ಯ ಪೂಜಾರಿ, ಪರಮೇಶ್ವರ್ ಪಟವಾಲ್, ಪ್ರಶಾಂತ್ ಕುಮಾರ್ ಶೆಟ್ಟಿ, ಜಯರಾಮ್ ಯಡ್ತರೆ, ವಸಂತ್ ಕುಮಾರ್ ಶೆಟ್ಟಿ, ಇಂದಿರಾ ಕೊಠಾರಿ, ಶಾಂತಾ ಆಚಾರ್ಯ ಸರ್ವರಿಗೂ ಸ್ವಾಗತ ಕೋರಿದ್ದಾರೆ. ಈ ಕುರಿತು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗಿರೀಶ್ ಬೈಂದೂರು ಪ್ರಕಟಣೆಯಲ್ಲಿ ಕೋರಿದ್ದಾರೆ.