ಮಹಾಲಿಂಗೇಶ್ವರ ಸನ್ನಿಧಿ, ಮಕ್ಕಿ ದೇವಸ್ಥಾನದ ಶಿಲಾ ದೇಗುಲದ ಲೋಕಾರ್ಪಣೆ, ಶಿಖರ ಕಲಶ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಕೋಟಿ ಶಿವ ಪಂಚಾಕ್ಷರಿ ಜಪ-ಯಜ್ಞ, ಮಹಾ ಅನ್ನಸಂತರ್ಪಣೆ, ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮಗಳು ಇಂದು ಬೆಳಿಗ್ಗೆಯಿಂದ ಆರಂಭವಾಗಿವೆ. ಈ ಧಾರ್ಮಿಕ ಕಾರ್ಯಕ್ರಮಗಳು ಏ. 25ರ ವರೆಗೆ ಜರುಗಲಿವೆ.
ಬೆಳಿಗ್ಗೆ 8ಗಂಟೆಯಿಂದ ಚಂಡೆವಾದನ, ವಿವಿಧ ವೇಷ ಭೂಷಣಗಳೊಂದಿಗೆ ನಡೆಯಿತು. ಸ್ವಾಮೀಜಿ, ಗಣ್ಯರನ್ನು ಭವ್ಯ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತರಲಾಯಿತು.
ಬೆಳಿಗ್ಗೆ 8ಕ್ಕೆ ಧಾರ್ಮಿಕ ಕಾರ್ಯಕ್ರಮಗಳ ಪ್ರಾರಂಭವಾಯಿತು. ಕುಕ್ಕೆ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ದಿವ್ಯ ಉಪಸ್ಥಿತಿಯಲ್ಲಿ ಅಷ್ಟೋತ್ತರ ಶತ ನಾಳಿಕೇರ ಖ೦ಡ ಮಹಾ ಗಣಪತಿ ಯಾಗದ ಪೂರ್ಣಾಹುತಿ, ಮಹಾಪೂಜಾ, ಮಹಾಮಂಗಳಾರತಿ ನಡೆಯಿತು.
ಮಧ್ಯಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ, ಸಂಜೆ 6ಕ್ಕೆ ವಿವಿಧ ಹೋಮ ಹವನಾದಿಗಳು, ಬ್ರಹ್ಮಮಂಡಲ ದರ್ಶನ, ಬ್ರಹ್ಮಕಲಶ ಸ್ಥಾಪನೆ, ಬ್ರಹ್ಮಕಲಶ ಅಧಿವಾಸ ಹೋಮ, ನವಕುಂಡಗಳಲ್ಲಿ ಅಧಿವಾಸ ಹೋಮ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ರಾತ್ರಿ 8ಕ್ಕೆ ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಡಾ. ಭೀಮೇಶ್ವರ ಜೋಶಿ, ವಿದ್ವಾನ್ ಗೋಪಾಲಕೃಷ್ಣ ಜೋಶಿ, ಕಟ್ಟೆಶಂಕರ ಪರಮೇಶ್ವರ ಭಟ್ಟ, ವಿಶ್ವನಾಥ ಭಟ್ಟ, ದಿಲೀಪ್ ಶ್ರೀಧರ ಭಟ್ಟ, ಚಂದ್ರಶೇಖರ ಅಡಿಗ ಅವರನ್ನು ಸನ್ಮಾನಿಸಲಾಯಿತು.
ವಿದ್ವಾನ್ ಸುಬ್ರಹ್ಮಣ್ಯ ಭಟ್, ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ, ಪ್ರಭಾಕರ್ ಮಹಾಬಲೇಶ್ವರ್ ರಾವ್ ಬಂಟ್ವಾಳ್, ಸುಮಲತ ಪ್ರಭಾಕರ್ ರಾವ್, ಕೆ.ಕಿಶೋರ್ ಕುಮಾರ್ ಹೆಗ್ಡೆ, ಗುರುರಾಜ್ ಭಟ್, ಬಾಲಚಂದ್ರ ಭಟ್, ಶರತ್ ಮಡಿಮಣ್, ಸತೀಶ್ ಶೆಟ್ಟಿ, ರವೀಂದ್ರ ವೆಂಕಟೇಶ್ ಕಿಣಿ, ಪದ್ಮನಾಭ ಮೇರ್ಟ, ಕಳಿ ಚಂದ್ರಯ್ಯ ಆಚಾರ್ಯ, ನಾಗರಾಜ್ ಭಟ್, ಜಾಹ್ನವಿ ಭಟ್, ಶ್ರಾವ್ಯ ಸೇರಿದಂತೆ ಹಲವರು ಇದ್ದರು.