ಮೈಸೂರು: ಜಿಲ್ಲೆಯಲ್ಲಿ ರಾತ್ರಿ 1 ಗಂಟೆಯವರೆಗೂ ವ್ಯಾಪಾರಕ್ಕೆ ಅನುಮತಿ ನೀಡಲು ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ನಡೆದ ಹೋಟೆಲ್ ಮಾಲೀಕರ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೈಟ್ ಲೈಫ್ಗೆ ಅನುಮತಿ ಇದ್ದು, ಅನುಷ್ಠಾನದ ಬಗ್ಗೆ ವಾರದೊಳಗೆ ತೀರ್ಮಾನ ಪ್ರಕಟಿಸಲಾಗುವುದು. ಇದರಿಂದಾಗಿ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಮದ್ಯಪಾನ ಮಾಡುವವರು ಎಷ್ಟು ಹೊತ್ತಾದರೂ ಸೇವಿಸುತ್ತಾರೆ. ಹೀಗಾಗಿ ಬೆಂಗಳೂರಿನಲ್ಲಿ ಈಗಾಗಲೇ ಅನುಮತಿ ನೀಡಲಾಗಿದೆ. ಇದನ್ನು ಜಿಲ್ಲೆಗೂ ವಿಸ್ತರಿಸಲು ನಿರ್ಧರಿಸಲಾಗುವುದು ಎಂದಿದ್ದಾರೆ.
ದೊಡ್ಡ ಕಟ್ಟಡಗಳಿಗೆ ಇಲ್ಲಿ ಅನುಮತಿ ನೀಡಬಾರದು. ಇಲ್ಲಿನ ಸಾಂಪ್ರದಾಯಿಕತೆ ಉಳಿಯಬೇಕು. ಪ್ರಪಂಚದ ಪ್ರಮುಖ ಪಟ್ಟಣಗಳು ತನ್ನ ಪರಂಪರೆಯನ್ನು ಸಂರಕ್ಷಣೆ ಮಾಡುತ್ತಿವೆ. ಮೈಸೂರಿನ ಭವ್ಯ ಪರಂಪರೆಯೂ ಉಳಿಯಬೇಕು. ಹೀಗಾಗಿ ಮಹಾನಗರ ಪಾಲಿಕೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.