ದೇಶದ ಬೆನ್ನೆಲುಬು ಎಂದರೆ ರೈತರ. ಆ ರೈತನ ಬೆನ್ನೆಲುಬು ಎಂದರೆ ನೀರು. ಆದ್ರೆ, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ, ಸಮರ್ಪಕ ನೀರಾವರಿ ವ್ಯವಸ್ಥೆ ಇರದೆ ರೈತರು ಪ್ರತಿ ವರ್ಷ ಸಂಕಷ್ಟ ಅನುಭವಿಸುತ್ತಾರೆ. ಇದನ್ನು ಮನಗಂಡ ಕರ್ನಾಟಕ ವೀರಶೈವ ಅಂಗಾಯತ ಅಭಿವೃದ್ಧಿ ನಿಗಮವು ಜೀವಜಲ ಯೋಜನೆ ಅನುಷ್ಠಾನಗೊಳಿಸಿದೆ. ಯೋಜನೆ ಅಡಿಯಲ್ಲಿ ಅನ್ನದಾತರು ಬೋರ್ ವೆಲ್ ಕೊರೆಸಲು 4.7 ಲಕ್ಷ ರೂ.ವರೆಗೆ ಸಬ್ಸಿಡಿ ಪಡೆಯಲಿದ್ದಾರೆ. ಹಾಗಾದ್ರೆ, ಸಬ್ಸಿಡಿ ಪಡೆಯೋದು ಹೇಗೆ? ಈ ಸ್ಟೋರಿ ನೋಡಿ.
ಯಾವ ಜಿಲ್ಲೆಯವರಿಗೆ ಎಷ್ಟು ಸಬ್ಸಿಡಿ?
ಬೋರ್ ವೆಲ್ ಗೆ ಎಷ್ಟು? ಪಂಪ್ ಸೆಟ್ ಗೆ ಎಷ್ಟು?
ವಿದ್ಯುತ್ ಸಂಪರ್ಕಕ್ಕೂ ಇದೆ ಸಬ್ಸಿಡಿ ಸೌಲಭ್ಯ
ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಸೇರಿ ಸುತ್ತಮುತ್ತಲಿನ 7 ಜಿಲ್ಲೆಗಳ ರೈತರಿಗೆ 4.75 ಲಕ್ಷ ರೂ. ಸಬ್ಸಿಡಿ ದೊರೆಯುತ್ತದೆ. ಈ ಜಿಲ್ಲೆಗಳನ್ನು ಹೊರತುಪಡಿಸಿ ಬಾಕಿ ಉಳಿದ 25 ಜಿಲ್ಲೆಗಳ ರೈತರು ಬೋರ್ ವೆಲ್ ಕೊರೆಸಲು 3.75 ಲಕ್ಷ ರೂ. ಸಬ್ಸಿಡಿ ದೊರೆಯುತ್ತದೆ. ಬೋರ್ ವೆಲ್ ಹಾಗೂ ಪಂಪ್ ಸೆಟ್ ವೆಚ್ಚಕ್ಕೆ 2.5 ಲಕ್ಷ ರೂ., ವಿದ್ಯುತ್ ಸಂಪರ್ಕಕ್ಕೆ 75 ಸಾವಿರ ರೂ. ನೀಡಲಾಗುತ್ತದೆ. ಉಳಿದ 50 ಸಾವಿರ ರೂಪಾಯಿಯನ್ನು ಶೇ.4ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.
ಏನಿದು ಜೀವಜಲ ಯೋಜನೆ?
ಇದು ಸರ್ಕಾರದ ಯೋಜನೆಯೇ?
ಯಾರಿಗೆಲ್ಲ ಯೋಜನೆಯ ಲಾಭ?
ಗ್ರಾಫಿಕ್ಸ್ ಔಟ್…
ಜೀವಜಲ ಯೋಜನೆಯು ಕರ್ನಾಟಕ ವೀರಶೈವ ಅಂಗಾಯತ ಅಭಿವೃದ್ಧಿ ನಿಗಮದ ಯೋಜನೆಯಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸಣ್ಣ ಹಿಡುವಳಿದಾರರಿಗೆ ನೀರಾವರಿ ಸೌಲಭ್ಯ ಒದಗಿಸುವುದೇ ಇದರ ಉದ್ದೇಶವಾಗಿದೆ. ವೀರಶೈವ ಲಿಂಗಾಯತ ಸಮುದಾಯದವರಿಗಾಗಿಯೇ ಯೋಜನೆ ರೂಪಿಸಲಾಗಿದೆ. ಇದು ಸರ್ಕಾರದ ಯೋಜನೆಯಾಗಿರುವುದರಿಂದ ರೈತರು ಯಾವುದೇ ಹಿಂಜರಿಕೆ ಇಲ್ಲದೆ ಅರ್ಜಿಯನ್ನು ಸಲ್ಲಿಸಿ, ಯೋಜನೆಯ ಲಾಭ ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸಲು ಅರ್ಹತೆಗಳು
- ವೀರಶೈವ ಲಿಂಗಾಯತ (3ಬಿ) ಸಮುದಾಯಕ್ಕೆ ಸೇರಿರಬೇಕು
- ಅರ್ಜಿ ಸಲ್ಲಿಸುವವರಿಗೆ 18-60 ವರ್ಷದ ವಯೋಮಿತಿ ಇದೆ
- ವಾರ್ಷಿಕ ಆದಾಯ 98 ಸಾವಿರ ರೂಪಾಯಿ ಮೀರಬಾರದು
ಗ್ರಾಫಿಕ್ಸ್ ಔಟ್…
ರಾಜ್ಯ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಕರ್ನಾಟಕ ವೀರಶೈವ ಅಂಗಾಯತ ಅಭಿವೃದ್ಧಿ ನಿಗಮವು ಸಬ್ಸಿಡಿ ನೀಡಲು ಹಲವು ಮಾನದಂಡಗಳನ್ನು ರೂಪಿಸಿದೆ. ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರು, 18 ವರ್ಷ ಮೀರಿದವರಿಗೆ ಯೋಜನೆ ಲಭ್ಯವಿದೆ. ಒಂದು ಮನೆಯಲ್ಲಿ ಒಬ್ಬರಿಗೆ ಮಾತ್ರ ಯೋಜನೆಯ ಲಾಭ ಸಿಗುತ್ತದೆ. ಗ್ರಾಮೀಣ ಪ್ರದೇಶಗಳ ವಾರ್ಷಿಕ ಆದಾಯ 98 ಸಾವಿರ ರೂ., ನಗರ ಪ್ರದೇಶಗಳ ರೈತರಿಗೆ 1.2 ಲಕ್ಷ ರೂ. ಮಿತಿ ಇದೆ.
ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಗ್ರಾಮ ಒನ್, ಕರ್ನಾಟಕ ಒನ್ ಗೆ ಭೇಟಿ ನೀಡಬಹುದು
ಸೇವಾ ಸಿಂಧು https://sevasindhu.karnataka.gov.in/ಗೆ ಭೇಟಿ ನೀಡಿ
ಅಗತ್ಯ ದಾಖಲೆ ನೀಡಿ, ಅರ್ಜಿ ಸಲ್ಲಿಸಿದರೆ ಸಹಾಯಧನ ಫಿಕ್ಸ್
ಯೋಜನೆಯ ಲಾಭ ಪಡೆಯುವ ಆಸಕ್ತಿ ಇದ್ದವರು ಹತ್ತಿರದ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ನೇರವಾಗಿ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಇಲ್ಲವೇ ಸೇವಾ ಸಿಂಧು ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟಿನಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿರುವ ಸಣ್ಣ ಪ್ರಮಾಣದ ರೈತರಿಗೆ ಆರ್ಥಿಕ ನೆರವು ನೀಡುವ ದೃಷ್ಟಿಯಿಂದ ಜೀವಜಲ ಯೋಜನೆಯನ್ನು ಜಾರಿಗೊಳಿಸಲಾಗಿದೆ. ವೀರಶೈವ ಲಿಂಗಾಯತರಲ್ಲದವರು ಗಂಗಾ ಕಲ್ಯಾಣ ಯೋಜನೆಯ ಮೂಲಕ ಉಚಿತವಾಗಿ ಬೋರ್ ವೆಲ್ ಕೊರೆಸುವ ಜತೆಗೆ ವಿದ್ಯುತ್ ಸಂಪರ್ಕವನ್ನೂ ಪಡೆಯಬಹುದಾಗಿದೆ.