ಮಳೆ ಆರ್ಭಟಕ್ಕೆ ಹಳ್ಳದ ಸೇತುವೆ ಕೊಚ್ಚಿ ಹೋಗಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಮಾಡಳ್ಳಿ ಗ್ರಾಮದಲ್ಲಿ ನಡೆದಿದೆ. ಮಾಡಳ್ಳಿ ಹಾಗೂ ಗುಂಜಳ ಗ್ರಾಮಗಳ ಹಳ್ಳದ ಸೇತುವೆ ಮತ್ತು ಮಾಡಳ್ಳಿ – ಗುಂಜಳ ಮಾರ್ಗ ಹುಬ್ಬಳ್ಳಿ ಸಂಪರ್ಕ ಕಡಿತವಾಗಿದೆ. ಹೀಗಾಗಿ ಹುಬ್ಬಳ್ಳಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಶಾಲಾ ಮಕ್ಕಳು, ವ್ಯಾಪಾರ ವಹಿವಾಟು ನಡೆಸುತ್ತಿದ್ದ ರೈತರ ಪರದಾಟ ನಡೆಸುತ್ತಿದ್ದು, ಆದಷ್ಟು ಬೇಗನೆ ಸೇತುವೆ ದುರಸ್ಥಿ ಮಾಡಿಸಿಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.