ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಉಪ್ಪುಂದ ಗ್ರಾಮದಲ್ಲಿ ಭದ್ರಕಾಳಿ ಮತ್ತು ಭೂತರಾಯ ಅಷ್ಟಬಂಧ ಪುನರ್ ಪ್ರಕಿಷ್ಠಾ ಬ್ರಹ್ಮಕಲಶೋತ್ಸವ ನಡೆಯಿತು.
ದೇವಳದ ಮುಖ ಮಂಟಪದ ಆದಿಯಾಗಿ ದೇವಿ ದುರ್ಗಾಪರಮೇಶ್ವರಿ ಸಾನಿಧ್ಯದಿಂದ ನೂರು ಅಡಿ ಅಂತರದಲ್ಲಿ ಪುರಾಣ ಪ್ರಸಿದ್ಧ ಐತಿಹಾಸಿಕ ಹಿನ್ನಲೆಯುಳ್ಳ ಭದ್ರಕಾಳಿ ಮತ್ತು ಭೂತರಾಯ ಅಷ್ಟಬಂಧ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಇತ್ತೀಚೆಗೆ ನಡೆಯಿತು.

ಶೃಂಗೇರಿ ವಿಧುಶೇಖರ ಭಾರತೀ ಮಹಾಸ್ವಾಮಿ, ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ತಂತ್ರಿ ವೇದಮೂರ್ತಿ ನಟರಾಜ ಉಪಾಧ್ಯಾಯರು ಪೆರಂಪಳ್ಳಿ, ವೇದಮೂರ್ತಿ ರಾಮಚಂದ್ರ ಭಟ್ ವೆಂಕಟಾಪುರ ಶಿರಾಲಿ ಮತ್ತು ಅರ್ಚಕ ವೃಂದದವರು ಧಾರ್ಮಿಕ ವಿಧಿ- ವಿಧಾನಗಳನ್ನು ನೆರವೇರಿಸಿದರು.
ಮೇ 14ರಂದು ಹಲವಾರು ಧಾರ್ಮಿಕ ವಿಧಿ ವಿಧಾನಗಳು ನಡೆದವು. ಮೇ 15ರಂದು ಗಣಯಾಗ, ನಾಗದೇವರಿಗೆ ನವಕುಂಭಾಭಿಷೇಕ, ಸರ್ಪ ಮೂಲ ಮಂತ್ರ ಹವನ, ಪ್ರಸನ್ನ ಪೂಜೆ, ಮಹಾಪೂಜೆ, “ಅನ್ನಸಂತರ್ಪಣೆ”, ಶಕ್ತಿ ದಂಡಕ ಪೂಜೆ, ಕಲಾತತ್ವಯಾಗ, ಭದ್ರಕಾಳಿ ಕುರುದಿ ತರ್ಪಣ, ಭದ್ರಕಾಳಿ ಹವನ, ಭೂತರಾಯನಿಗೆ ಭೂತಮಾರಾಣ ಬಲಿ ನಡೆದವು.
ಈ ಹಿನ್ನೆಲೆಯಲ್ಲಿ ದೇವಸ್ಥಾನ ಹೂವಿನ ಅಲಂಕಾರದಿಂದ ಕಂಗೋಳಿಸುತ್ತಿತ್ತು. ಈ ವೇಳೆ ಗ್ರಾಮಸ್ಥರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಸರ್ವ ಸದಸ್ಯರು, ಭಕ್ತರು ಇದ್ದರು.