ಕಾರ್ಮಿಕರ ಮಕ್ಕಳಿಗೆ ಸೇರಬೇಕಾದ ಪುಸ್ತಕಗಳು ಬೀದಿಯಲ್ಲಿ ಮಾರಾಟವಾಗುತ್ತಿವೆ ಎಂಬ ಗಂಭೀರ ಆರೋಪವೊಂದು ಕೇಳಿ ಬಂದಿದೆ.
ಕಾರ್ಮಿಕ ಸಚಿವ ಸಂತೋಷ್ ಲಾಡ್ ನೋಡಲೇಬೇಕಾದ ಸ್ಟೋರಿ ಇದು. ಕಾರ್ಮಿಕ ಇಲಾಖೆಯಿಂದ ಹಂಚಿಕೆಯಾಗಬೇಕಿದ್ದ ಪುಸ್ತಕಗಳು ಅಕ್ರಮವಾಗಿ ಮಾರಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಅಂಗಡಿಯೊಂದರ ಮೇಲೆ ಕರುನಾಡ ಕಾರ್ಮಿಕರ ಸೇನೆಯಿಂದ ದಾಳಿ ನಡೆಸಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.
ಬೀದಿಯಲ್ಲಿ ರಾಜಾರೋಷವಾಗಿ ನೂರಾರು ಪುಸ್ತಕವನ್ನು ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಘಟನೆ ಬಗ್ಗೆ ಲೇಬರ್ ಆಫೀಸರ್ ಗಳಿಂದ ಮಾಹಿತಿ ಕಲೆ ಹಾಕಲಾಗಿದ್ದು, ರಾಜಗೋಪಾಲ್ ನಗರ ಠಾಣೆಯಲ್ಲಿ ಈ ಕುರಿತು ದೂರು ನೀಡಲಾಗಿದೆ.