ಸಿಎಂ ಮನೆಗೆ ಬಾಂಬ್ ಇಟ್ಟು ಸ್ಪೋಟಿಸುವುದಾಗಿ ಬೆದರಿಕೆಯ ಕರೆಯೊಂದು ಬಂದಿದೆ.
ಸಿಎಂ ಕಚೇರಿಗೆ ಇ ಮೇಲ್ ಮೂಲಕ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ಈ ಮೇಲ್ ಜೂ. 6ರಂದು ಬಂದಿದೆ. ಮೇಲ್ ಗಮನಿಸಿದ ಸಿಬ್ಬಂದಿ, ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸಿಎಂ ಮನೆ ಹಾಗೂ ಪಾಸ್ ಪೋರ್ಟ್ ಕಚೇರಿಯನ್ನು ಬಾಂಬ್ ಮೂಲಕ ಸ್ಫೋಟಿಸುವುದಾಗಿ ಬೆದರಿಕೆ ಕರೆ ಬಂದಿದೆ.
ಮಾನವ ಹುತಾತ್ಮರನ್ನು ಬಳಸಿ ಆತ್ಮಹತ್ಯೆ ಮಾಡಿಕೊಳ್ಳುವ ಬಾಂಬ್ ನ್ನು ಸ್ಪೋಟಿಸುವುದಾಗಿ ಮೇಲ್ ನಲ್ಲಿ ಹೇಳಲಾಗಿದೆ. ಕೂಡಲೇ ಹೈ ಗ್ರೌಂಡ್ ಪೊಲೀಸರು, ಸಿಎಂ ಮನೆ ಮನೆ ತಪಾಸಣೆ ಮಾಡಿದ್ದಾರೆ. ತಪಾಸಣೆ ವೇಳೆ ಇದೊಂದು ಹುಸಿ ಬಾಂಬ್ ಕರೆ ಎಂಬುವುದು ದೃಢಪಟ್ಟಿದೆ. ಈ ಕುರಿತು ಎನ್ ಸಿಆರ್ ಮಾಡಿದ್ದ ಹೈ ಗ್ರೌಂಡ್ ಇನ್ಸ್ ಪೆಕ್ಟರ್ ಭರತ್ ಅವರು 1ನೇ ಎ.ಸಿ.ಜೆ.ಎಂ.ನ್ಯಾಯಾಲಯದ ಅನುಮತಿ ಪಡೆದು ಎಫ್ ಐಆರ್ ದಾಖಲಿಸಿದ್ದಾರೆ. ಅಲ್ಲದೇ, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.