ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕಂಚಿಪುರ ಗ್ರಾಮದ ವರದ ಸ್ವಾಮಿಯ ರಥೋತ್ಸವದ ಹಿನ್ನಲೆಯಲ್ಲಿ ಭಕ್ತರು ಕಂಚಿವರದ ಸ್ವಾಮಿಗೆ ದುಡ್ಡಿನ ಮಳೆಗರೆದಿದ್ದಾರೆ.
ಕಂಚಿಪುರ ಗ್ರಾಮದ ಆರಾಧ್ಯದೈವ ಕಂಚಿ ವರದರಾಜ ಸ್ವಾಮಿ ದೇವರಿಗೆ ಬೊಗಸೆ ಬೊಗಸೆ ದುಡ್ಡು ತೂರಿ ಭಕ್ತರು ಪರಾಕಾಷ್ಠೆ ಮೆರೆದಿದ್ದಾರೆ. ಆರಾಧ್ಯದೈವ ವರದಯ್ಯನಿಗೆ ದುಡ್ಡು ತೂರಿ ಭಕ್ತರು ಹರಕೆ ತೀರಿಸಿದ್ದಾರೆ. ಇಷ್ಟಾರ್ಥ ಸಿದ್ದಿ, ಹರಕೆ ತೀರಿಸಲು ದುಡ್ಡು ತೂರುತ್ತಾರೆ.
ಹೀಗಾಗಿ ಹಲವು ಭಕ್ತರು ಟವೆಲ್ ಹಾಕಿ ದುಡ್ಡು ಹಿಡಿಯುತ್ತಾರೆ. ಸಾವಿರಾರು ಭಕ್ತರ ಮಧ್ಯೆ ವರದಯ್ಯನ ಹಣದ ಮಳೆ ಕುಣಿಯುತ್ತ ಸಾಗುತ್ತದೆ. ಹೀಗಾಗಿ ಪ್ರತಿ ವರ್ಷ ಭಕ್ತಸಾಗರವೇ ಹರಿದು ಬಂದಿರುತ್ತದೆ. ಮನೆ ದೇವರಿಗೆ ಪೂಜೆ ಸಲ್ಲಿಸಿ ಪ್ರತಿಯೊಬ್ಬರು ಪುನೀತರಾಗಿದ್ದಾರೆ.