ಮೈಸೂರು ಜಿಲ್ಲೆಯ ಬನ್ನೂರಿನಲ್ಲಿ ನಡೆದಿದ್ದ ಅಪಘಾತದಿಂದಾಗಿ ಕಾವೇರಿ ನದಿಗೆ ಬಿದ್ದಿದ್ದ ಮಹಿಳೆಯ ಶವ ಪತ್ತೆಯಾಗಿದೆ.
ಟಿ.ನರಸಿಪುರ ತಾಲೂಕಿನ ಬನ್ನೂರಿನಲ್ಲಿ ಈ ಘಟನೆ ನಡೆದಿದೆ. ಕಾವೇರಿ ನದಿಯಲ್ಲಿ ಬಿದ್ದಿದ್ದ ಪಾರ್ವತಿ (45) ಎಂಬುವವರ ಶವ ಪತ್ತೆಯಾಗಿದೆ. ಬನ್ನೂರಿನ ಸೇತುವೆ ಬಳಿ ನಡೆದಿದ್ದ ಕಾರು ಹಾಗೂ ಬೈಕ್ ಅಪಘಾತದಲ್ಲಿ ಪಾರ್ವತಿ ನಾಪತ್ತೆಯಾಗಿದ್ದರು. ಅಲ್ಲದೇ, ಬೈಕ್ ಸವಾರ ಶಂಕರ್ (21) ಸ್ಥಳದಲ್ಲೇ ಸಾವನ್ನಪ್ಪಿದ್ದರು. ಬೈಕ್ ನ ಹಿಂಬದಿ ಕುಳಿತಿದ್ದ ಶಂಕರ್ ತಾಯಿ ಪಾರ್ವತಿ ಡಿಕ್ಕಿಯ ರಭಸಕ್ಕೆ ಕಾವೇರಿ ನದಿಗೆ ಬಿದ್ದಿದ್ದರು. ಟಿ.ನರಸಿಪುರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಶವ ಪತ್ತೆ ಹಚ್ಚಿದ್ದಾರೆ.