11 ಜನರ ಸಾವಿಗೆ ಸಾಕ್ಷಿಯಾದ ಚಿನ್ನಸ್ವಾಮಿ ಕ್ರೀಡಾಂಗಣ ಪ್ರದೇಶ ನಿಜಕ್ಕೂ ಅತ್ಯಂತ ಘನಘೋರ, ಭೀಕರವಾಗಿತ್ತು.
ಎಲ್ಲೆಂದರಲ್ಲಿ ರಾಶಿ ಬಿದ್ದಿರುವ ಚಪ್ಪಲಿಗಳು. ಚೆಲ್ಲಾಪಿಲ್ಲಿಯಾಗಿರುವ ಬ್ಯಾರಿಕೇಡ್ ಗಳು ಭೀಕರ ದುರಂತಕ್ಕೆ ಸಾಕ್ಷಿ ಹೇಳುತ್ತಿವೆ. ಮಹಿಳೆಯರು, ಪುಟಾಣಿಗಳ ಚಪ್ಪಲಿಗಳು ಮೈದಾನದ ಸುತ್ತಲೂ ದಂಡಿಯಾಗಿ ಬಿದ್ದಿವೆ. ಅಭಿಮಾನಿಗಳ ಆರ್ಭಟಕ್ಕೆ ಪೊಲೀಸರ ಬ್ಯಾರಿಕೇಡ್ ಗಳೆಲ್ಲಾ ಚಿಂದಿಯಾಗಿವೆ. ಅಪಾರ ನೀರಿನ ಖಾಲಿ ಬಾಟೆಲ್ ಗಳು, ಕನ್ನಡಕಗಳು, ಬ್ಯಾಗ್ ಹೀಗೆ ಮೈದಾನದ ವ್ಯಾಪ್ತಿಯಲ್ಲಿ ಅಪಾರ ಕಸದ ರಾಶಿಯೇ ಬಿದ್ದಿದೆ.