ಬೆಂಗಳೂರು: ಬಿಜೆಪಿಯು ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯನ್ನು ಮುಂದೂಡಿದ್ದಕ್ಕೆ ಹಲವರು ಲೇವಡಿ ಮಾಡುತ್ತಿದ್ದಾರೆ.
ಜೈ ಹಿಂದ್ ತಿರಂಗಾ ಯಾತ್ರೆಯನ್ನು ಎರಡು ದಿನಗಳ ಹಿಂದೆಯೇ ಕಾಂಗ್ರೆಸ್ ಹಮ್ಮಿಕೊಂಡಿತ್ತು. ಆದರೆ, ಬಿಜೆಪಿ ತಿರಂಗಾ ಯಾತ್ರೆ ಮಾಡುವುದರಲ್ಲಿ ಹಿಂದೆ ಬಿತ್ತಾ? ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.
ಕೆ.ಆರ್. ಸರ್ಕಲ್ ನಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ತಿರಂಗಾ ಯಾತ್ರೆ ನಡೆದಿತ್ತು. ನಾಗರಿಕರು, ನಿವೃತ್ತ ಸೈನಿಕರು, ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ತಿರಂಗಾ ಯಾತ್ರೆ ನಡೆಸಲಾಗಿತ್ತು.
ಆದರೆ, ಬಿಜೆಪಿ ಪಕ್ಷದಿಂದ ಆಯೋಜನೆಗೊಂಡಿದ್ದ ತಿರಂಗಾ ಯಾತ್ರೆಯನ್ನು ಮುಂದೂಡಲಾಗಿದೆ. ಇಂದು ಬೆಳಗ್ಗೆ 11ಕ್ಕೆ ನಡೆಯಬೇಕಿದ್ದ, ಯಾತ್ರೆ ಮುಂದೂಡಲಾಗಿದೆ. ಈ ಯಾತ್ರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನ ಪರಿಷತ್ ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ನಡೆಯಬೇಕಿತ್ತು. ಮಂತ್ರಿ ಮಾಲ್ ನಿಂದ ಮಲ್ಲೇಶ್ವರಂ ನ 18ನೇ ಕ್ರಾಸ್ ವರೆಗೂ ತಿರಂಗ ಯಾತ್ರೆಯನ್ನು ಬಿಜೆಪಿ ಆಯೋಜಿಸಿತ್ತು. ಈ ಯಾತ್ರೆಯನ್ನು ಮೊದಲು ಮಾಡುವಲ್ಲಿ ಬಿಜೆಪಿ ಎಡವಿತ್ತು. ಈಗ ಮತ್ತೆ ಯಾತ್ರೆ ಮುಂದೂಡಿ ಬಿಜೆಪಿ ನಗೆಪಾಟಲಿಗೆ ಇಡಾಗಿದೆ.