ವಿಜಯಪುರ.: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯ ವಿಷಯ ಚರ್ಚೆಯಾಗುತ್ತಿರುವುದೇ ವಿರೋಧ ಇದೆ ಎನ್ನುವ ಕಾರಣಕ್ಕೆ. ಇಲ್ಲವಾದರೆ ಸರ್ವಾನುಮತದಿಂದ ಆಯ್ಕೆಯಾಗುತ್ತಿತ್ತು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಹೈಕಮಾಂಡ್ ಭಾವನೆ ಹೇಳಲು ಅವಕಾಶ ನೀಡಿದ್ದು ಒಳ್ಳೆಯದು. ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ನೀಡುವಾಗಲೇ ಈ ಕೆಲಸ ಮಾಡಿದ್ದರೆ ಒಳ್ಳೆಯದಾಗುತ್ತಿತ್ತು. ಆಗ ಅವಕಾಶ ನೀಡಿದ್ದರೆ ಬಿಜೆಪಿ ಇಷ್ಟೊಂದು ವೀಕ್ ಆಗುತ್ತಿರಲಿಲ್ಲ. ವಿಜಯೇಂದ್ರ ಅಧ್ಯಕ್ಷ ಆದ ಮೇಲೆ ಕಾಂಗ್ರೆಸ್ ವಿರುದ್ಧದ ಎಲ್ಲ ಹೋರಾಟ ವಿಫಲವಾಗಿವೆ. ಬಿಜೆಪಿಗೆ ಜನರ ವಿಶ್ವಾಸ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ ಎಂದಿದ್ದಾರೆ.
ಬಿಜೆಪಿಯಲ್ಲಿ ಬಣ ಬಡಿದಾಟ ವಿಚಾರವಾಗಿ ಮಾತನಾಡಿದ ಅವರು, ವಿಜಯೇಂದ್ರನನ್ನು ತೆಗೆಯಬೇಕು ಎನ್ನುವುದೇ ಎಲ್ಲ ಬಣಗಳ ಗುರಿಯಾಗಿದೆ. ಪೂಜ್ಯ ತಂದೆಯವರ ಹೆಸರು ಹೇಳುತ್ತಾರೆ. ಆದರೆ, ತನ್ನ ಸಾಧನೆ ಹೇಳಬೇಕು. ಹೀನಾಯವಾಗಿ ಸೋತಾಗ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಯಿತು ಎಂದಿದ್ದಾರೆ.
ಮೂರು ವರ್ಷಗಳಲ್ಲಿ ಬಿಜೆಪಿಯಲ್ಲಿ ಯಾರು ಜನನಾಯಕ ಆಗ್ತಾರೆ ಎಂಬುವುದನ್ನು ನೋಡಬೇಕಿದೆ. ರಾಜ್ಯದಲ್ಲಿ ಬಿಜೆಪಿಗೆ ಬದಲಾವಣೆಯ ಅವಶ್ಯಕತೆ ಇದೆ. ನಾನೇ ನಾನೇ ರಾಜ್ಯಾಧ್ಯಕ್ಷ ಆಗುತ್ತೇನೆಂದು ಹಿಂದೆ ಕಣ್ಮೀರು ಹಾಕಿ ಯಡಿಯೂರಪ್ಪ ಆಗಿದ್ದರು. ಆಗ ನನ್ನನ್ನು ಹೊರ ಹಾಕಿಸಿದ್ದರು. ಅಮೀತ್ ಶಾ ಎದುರು ವಿಜಯೇಂದ್ರ ಯತ್ನಾಳ್ ಹೊರಹಾಕಿದ ಮೇಲೆ ಪಕ್ಷ ಶಕ್ತಿಯುತವಾಗಿದೆ ಎಂದಿದ್ದಾರೆ. ಇದಕ್ಕೆ ವಿಜಯೇಂದ್ರಗೆ ಶಾ ಬೈದಿದ್ದಾರೆ. ಬಲ್ಲ ಮೂಲಗಳಿಂದ ನಮಗೆ ಮಾಹಿತಿ ಬಂದಿದೆ. ಶಾ ಎದುರು ನನ್ನ ಹೆಸರು ಯಾಕೆ ಬಳಸಿದರು ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದ್ದಾರೆ.