ಬೆಂಗಳೂರು: ರಾಜ್ಯ ಬಿಜೆಪಿಯು ಕೆಲವು ಜಿಲ್ಲೆಗಳಿಗೆ ನೂತನ ಜಿಲ್ಲಾಧ್ಯಕ್ಷರ ನೇಮಕ ಮಾಡಿ ಆದೇಶ ಹೊರಡಿಸಿದೆ.
ಈ ಹಿಂದೆ ಬಿಜೆಪಿಯು ಕೆಲವು ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ಈಗ ಬಾಕಿ ಉಳಿದಿರುವ ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರ ನೇಮಕ ಮಾಡಿ ಆದೇಶ ಹೊರಡಿಸಿದೆ. ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ಆಯ್ಕೆಯ ವಿಚಾರವಾಗಿ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದು. ಈಗ ಚಿಕ್ಕಬಳ್ಳಾಪುರ ಜಿಲ್ಲೆಗೆ ನೂತನ ಜಿಲ್ಲಾಧ್ಯಕ್ಷರ ನೇಮಕ ಮಾಡಲಾಗಿದೆ. ಜಿಲ್ಲಾಧ್ಯಕ್ಷರ ಚುನಾವಣಾ ಅಧಿಕಾರಿಯಾಗಿದ್ದ ಕ್ಯಾ. ಗಣೇಶ್ ಕಾರ್ಣಿಕ್ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.
ಬಿಜೆಪಿಯ ಹತ್ತು ಸಂಘಟನಾತ್ಮಕ ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರ ನೇಮಕ
ಮೈಸೂರು ಗ್ರಾಮಾಂತರ- ಕೆ.ಎನ್. ಸುಬ್ಬಣ್ಣ
ಹಾಸನ- ಸಿದ್ದೇಶ್ ನಾಗೇಂದ್ರ
ಕೊಡಗು- ರವಿ ಕಾಳಪ್ಪ
ಉಡುಪಿ- ಕುತ್ಯಾರು ನವೀನ್ ಶೆಟ್ಟಿ
ಹಾವೇರಿ- ವಿರೂಪಾಕ್ಷಪ್ಪ ಬಳ್ಳಾರಿ
ದಾವಣಗೆರೆ- ಎನ್. ರಾಜಶೇಖರ
ಚಿತ್ರದುರ್ಗ- ಕೆ.ಟಿ. ಕುಮಾರಸ್ವಾಮಿ
ತುಮಕೂರು- ಹೆಚ್.ಎಸ್. ರವಿಶಂಕರ್ (ಹೆಬ್ಬಾಕ)
ಮಧುಗಿರಿ- ಚಿದಾನಂದ ಗೌಡ.
ಚಿಕ್ಕಬಳ್ಳಾಪುರ- ಎಸ್.ವಿ. ರಾಮಚಂದ್ರ ಗೌಡ (ಸೀಕಲ್)