ರಾಯಚೂರು: ಜಿಲ್ಲೆಯ ಮಾನ್ವಿ (Manvi) ಪಟ್ಟಣ ಸೇರಿದಂತೆ ಹಲವೆಡೆ ಪಕ್ಷಿಗಳು ಸಾವನ್ನಪ್ಪಿದ್ದವು. ಹೀಗಾಗಿ ಹಕ್ಕಿ ಜ್ವರದ ಆತಂಕ ಮನೆ ಮಾಡಿತ್ತು. ಆದರೆ, ಈಗ ವರದಿಯಲ್ಲಿ ಹಕ್ಕಿಜ್ವರದಿಂದ ಅವು ಸಾವನ್ನಪ್ಪಿಲ್ಲ ಎಂದು ತಿಳಿದು ಬಂದಿದೆ.
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಲವೆಡೆ ಪಾರಿವಾಳ, ಬೆಳ್ಳಕ್ಕಿ, ಕಾಗೆ ಸೇರಿದಂತೆ ವಿವಿಧ ರೀತಿಯ ಹಕ್ಕಿಗಳು ಸತ್ತು ಬೀಳುತ್ತಿದ್ದವು. ಹೀಗೆ ಸುಮಾರು 30ಕ್ಕೂ ಅಧಿಕ ಹಕ್ಕಿಗಳು ಸಾವನ್ನಪ್ಪಿದ್ದವು. ಹೀಗಾಗಿ ಹಕ್ಕಿ ಜ್ವರದ ಆತಂಕ ಮನೆ ಮಾಡಿತ್ತು. ಪಶು ವೈದ್ಯಾಧಿಕಾರಿಗಳು ಪಕ್ಷಿಗಳ ಕಳೇಬರ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಆದರೆ, ಹಕ್ಕಿ ಜ್ವರದಿಂದ (Bird flu) ಮೃತಪಟ್ಟಿಲ್ಲ ಎಂದು ಬೆಂಗಳೂರಿನ ಐಎಹೆಚ್ವಿಬಿ ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ.
ಪ್ರಯೋಗಾಲಯದಲ್ಲಿ ನ್ಯೂಕ್ಯಾಟಲ್ ಡಿಸೀಸ್ ವೈರಸ್, ಎವೀಯನ್ ಇನ್ಫ್ಲೋವೆಂಜಾ, RT-PCR, ಎಲ್ಎಫ್ಎ ಮೆಥಡ್ಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಯಲ್ಲಿ ಪಕ್ಷಿಗಳು ಹಕ್ಕಿ ಜ್ವರದಿಂದ ಸಾವನ್ನಪ್ಪಿಲ್ಲ ಎನ್ನುವುದು ಸಾಬೀತಾಗಿದೆ. ಈ ಮೂಲಕ ರಾಯಚೂರು ಜನರ ಆತಂಕ ದೂರವಾಗಿದೆ.
ರಾಜ್ಯದ ಚಿಕ್ಕಬಳ್ಳಾಪುರ, ಬಳ್ಳಾರಿ ಸೇರಿದಂತೆ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಗಡಿಯಲ್ಲಿ ಹಕ್ಕಿ ಜ್ವರದ ಆತಂಕ ಮನೆ ಮಾಡಿದೆ. ಹೀಗಾಗಿ ಗಡಿಯ ಜಿಲ್ಲಾಡಳಿತಗಳು ಎಚ್ಚರಿಕೆ ವಹಿಸಿವೆ.