ಬಿಗ್ ಬಾಸ್ ಕನ್ನಡದ ರಿಯಾಲಿಟಿ ಶೋಗಳಲ್ಲಿ ಸಾಕಷ್ಟು ಹೆಸರು ಪಡೆದಿರುವ ಕಾರ್ಯಕ್ರಮ. ಬಿಗ್ ಬಾಸ್ ಅಂದ್ರೆ ಕೊನೆಯಲ್ಲಿ ಪ್ರಶಸ್ತಿ ಗೆದ್ದವರಲ್ಲ. ಸುದೀಪ್ ಮಾತ್ರ. ಅವರು ಮಾತ್ರ ಏಕಮೇವ ಬಿಗ್ ಬಾಸ್ ಎಂದು ಅಭಿಮಾನಿಗಳು ಕಿಚ್ಚನ ನಿರೂಪಣೆ ಮೆಚ್ಚಿಕೊಂಡಿದ್ದಾರೆ.
ಕಳೆದ 11 ಸೀಸನ್ ಗಳಿಂದಲೂ ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತ ಬರುತ್ತಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ಎಲ್ಲಿಯೂ ಕಿಚ್ಚನನ್ನು ಕನ್ನಡಾಭಿಮಾನಿಗಳು ವಿರೋಧಿಸಿಲ್ಲ. ಬದಲಾಗಿ ಬಿಗ್ ಬಾಸ್ ಗೆ ಕಿಚ್ಚ ಇಲ್ಲ ಅಂದರೆ ಅದು ನಡೆಯುವುದೇ ಇಲ್ಲ ಎಂಬಷ್ಟರ ಮಟ್ಟಿಗೆ ಕನ್ನಡಾಭಿಮಾನಿಗಳು ಕಿಚ್ಚ ಹಾಗೂ ಬಿಗ್ ಬಾಸ್ ಕಾರ್ಯಕ್ರಮವನ್ನು ಬೆಸೆದು ಬಿಟ್ಟಿದ್ದಾರೆ. ಈಗ ಈ ಬಿಗ್ ಬಾಸ್ ತಂಡದಿಂದ ಮತ್ತೊಂದು ಅಪ್ಡೇಟ್ ಸಿಗುತ್ತಿದೆ.
ಬಿಗ್ಬಾಸ್ (Bigg Boss Kannada) 11 ಸೀಸನ್ಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ. ಆದರೆ, ಈಗ ವಿಷಯ ಅದಲ್ಲ. ಕಿಚ್ಚ ಸುದೀಪ್ 11ನೇ ಸೀಸನ್ ನಡೆಯುತ್ತಿರುವಾಗಲೇ ಇದು ನಾನು ನಡೆಸಿಕೊಡುವ ಕೊನೆಯ ಸೀಸನ್ ಎಂದು ಘೋಷಿಸಿದ್ದರು. ಕಿಚ್ಚನ ಈ ಮಾತು ಬಿಗ್ ಬಾಸ್ ವೀಕ್ಷಕರಿಗೆ ಶಾಕ್ ನೀಡಿತ್ತು. ಹೀಗಾಗಿ ಅಭಿಮಾನಿಗಳು ಬೇಸರಿಸಿಕೊಂಡಿದ್ದರು. ಬಿಗ್ ಬಾಸ್ ಅಂದ್ರೆ ಕಿಚ್ಚ, ಕಿಚ್ಚ ಅಂದ್ರೆ ಬಿಗ್ ಬಾಸ್ ಎಂದು ಜನ ಕೊಂಡಾಡಿದ್ದಲ್ಲದೇ, ನೀವೇ ಬಿಗ್ ಬಾಸ್ ಆಗಿ ಇರಬೇಕು ಎಂದು ಹೇಳಿದ್ದರು. ಹೀಗಾಗಿ ಮುಂದಿನ ಬಾರಿಯೂ ನೀವೇ ಬಿಗ್ ಬಾಸ್ ಆಗಿ ಎಂಟ್ರಿ ಕೊಡಿ ಎಂದು ಮನವಿ ಮಾಡಿದ್ದರು. ಆ ಮನವಿ ಈಗಲೂ ನಡೆಯುತ್ತಿದೆ.
ಆದರೆ, ಈಗ ಬಿಗ್ ಬಾಸ್ ಸೀಸನ್ 12 ಆರಂಭವಾಗಲು ಇನ್ನೂ ಕೆಲವು ತಿಂಗಳು ಬಾಕಿ ಇವೆ. ಈ ಮಧ್ಯೆ ಸೀಸನ್-12ಕ್ಕೂ ಕಿಚ್ಚ ಸುದೀಪ್ ನಿರೂಪಕರಾಗಿಯೇ ಮುಂದುವರೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ವಿಷಯವಾಗಿ ಈಗಾಗಲೇ ಬಿಗ್ ಬಾಸ್ ತಂಡ ಸುದೀಪ್ ಅವರ ಮನವೊಲಿಸಲು ಯಶಸ್ಸು ಕಂಡಿದೆ ಎನ್ನಲಾಗುತ್ತಿದೆ. ಹೀಗಾಗಿಯೇ ಕಿಚ್ಚ ಸುದೀಪ್ ಸೇರಿದಂತೆ ಬಿಗ್ ಬಾಸ್ ತಂಡ ಸುದ್ದಿಗೋಷ್ಠಿ ನಡೆಸಲು ಮುಂದಾಗಿದೆ. ಜೂನ್ 30ರಂದು ಬಿಗ್ಬಾಸ್ ರಿಯಾಲಿಟಿ ಶೋ ಬಗ್ಗೆ ಮಾಹಿತಿ ನೀಡಲು ಬಿಗ್ ಬಾಸ್ ತಂಡ ಮುಂದಾಗಿದೆ.
ಹೀಗಾಗಿ ಅಭಿಮಾನಿಗಳ ವಲಯದಲ್ಲಿ ದೊಡ್ಡ ಕುತೂಹಲವೊಂದು ಮನೆ ಮಾಡಿದೆ. ಸೀಸನ್-12ರ ನಿರೂಪಣೆಯನ್ನು ಯಾರು ಮಾಡುತ್ತಾರೆ ಎನ್ನುವುದು ಈಗಲೂ ಕೂಡಾ ಪ್ರಶ್ನೆಯಾಗಿ ಕಾಡುತ್ತಿದೆ. ನಟ ಸುದೀಪ್ ಅವರನ್ನು ರಿಯಾಲಿಟಿ ಶೋಗೆ ನಿರೂಪಕರಾಗಿ ಮುಂದುವರೆಯುವಂತೆ ಮನವೊಲಿಸುವ ಪ್ರಯತ್ನ ತೆರೆಮರೆಯಲ್ಲಿ ನಡೆದಿದೆಯಾ? ಕಿಚ್ಚ ಇದಕ್ಕೆ ಒಪ್ಪಿಕೊಂಡಿದ್ದಾರಾ? ಸುದೀಪ್ ರನ್ನು ಮನವೊಲಿಸರು ತಂಡ ಯಶಸ್ಸು ಕಂಡಿದೆಯೇ? ಬಿಗ್ ಬಾಸ್ ಅಭಿಮಾನಿಗಳ ಕನಸು ಸೀಸನ್ 12ರಲ್ಲೂ ಮುಂದುವರೆಯಲಿದೆಯೇ ಎಂಬ ಚರ್ಚೆಗಳು ಈಗ ಆರಂಭವಾಗಿವೆ. ಸುದ್ದಿಗೋಷ್ಠಿಯಲ್ಲಿ ಯಾವ ಮಾಹಿತಿ ಹೊರ ಬರಲಿದೆ? ಎಂಬುವುದನ್ನು ಕರ್ನಾಟಕ ನ್ಯೂಸ್ ಬೀಟ್ ಕೂಡ ನಿಮ್ಮ ಮುಂದೆ ಸದ್ಯದಲ್ಲೇ ಪ್ರಸ್ತುತ ಪಡಿಸಲಿದೆ.