ಸ್ಯಾಂಡಲ್ ವುಡ್ ಸ್ಟಾರ್ ದರ್ಶನ್ ವಿದೇಶ ಪ್ರವಾಸಕ್ಕೆ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. 25 ದಿನಗಳ ಕಾಲ ವಿದೇಶ ಯಾತ್ರೆಗೆ ಬೆಂಗಳೂರಿನ 64ನೇ ಸಿಸಿಹೆಚ್ ಕೋರ್ಟ್ ಅಸ್ತು ಎಂದಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ದರ್ಶನ್, ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಡೆವಿಲ್ ಸಿನಿಮಾದ ಹಾಡಿನ ಚಿತ್ರೀಕರಣಕ್ಕಾಗಿ ದುಬೈ ಹಾಗೂ ಯುರೋಪ್ ಗೆ ತೆರಳಲು ಅನುಮತಿ ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಇಂದು ತನ್ನ ಆದೇಶ ನೀಡಿದ ಕೋರ್ಟ್ 25 ದಿನಗಳ ಪ್ರವಾಸಕ್ಕೆ ಓಕೆ ಅಂದಿದೆ.
ಡೆವಿಲ್ ಸಿನಿಮಾದ ಹಾಡಿನ ಚಿತ್ರೀಕರಣಕ್ಕಾಗಿ ಜೂನ್ 1ರಿಂದ ಜೂನ್ 25ರ ವರೆಗೂ ದುಬೈ ಮತ್ತು ಯುರೋಪ್ ಗೆ ಹೋಗಲು ನ್ಯಾಯಾಲಯ ಸಮ್ಮತಿ ನೀಡಿದೆ. ಒಂದೊಮ್ಮೆ ದರ್ಶನ್ ಪ್ರವಾಸಕ್ಕೆ ಅನುಮತಿ ನೀಡಿದರೆ ವಿದೇಶಕ್ಕೆ ಪರಾರಿಯಾಗಿಬಿಡಬಹುದು ಅವರಿಗೆ ಮನವಿ ಪುರಸ್ಕರಿಸಬಾರದು ಎದು ಇತ್ತೀಚೆಗೆ ಎಸ್ ಪಿಪಿ ವಾದ ಮಂಡಿಸಿದ್ದರು. ಆದರೀಗ ಅಂತಿಮವಾಗಿ ಕೋರ್ಟ್, ದರ್ಶನ್ ವಿದೇಶ ಪ್ರವಾಸ ಭಾಗ್ಯಕ್ಕೆ ಓಕೆ ಅಂದಿದೆ. ಹೀಗಾಗಿ ಕೊಲೆ ಆರೋಪ ಎದುರಿಸುತ್ತಿರುವ ದರ್ಶನ್ ಇದೀಗ 25 ದಿನ ದೇಶ ಬಿಟ್ಟು ವಿದೇಶಕ್ಕೆ ಹಾರಲಿದ್ದಾರೆ.