ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪೂರ್ವ ಮುಂಗಾರು ಅಬ್ಬರ ಮತ್ತೆ ಜೋರು ಪಡೆದಿದ್ದು, ಜನ – ಜೀವನ ಅಸ್ತವ್ಯಸ್ಥಗೊಂಡಿದೆ.
ಶನಿವಾರ ಸಂಜೆಯಿಂದ ಸುರಿದ ಮಳೆಗೆ ಹಲವು ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಮಳೆ-ಗಾಳಿಗೆ ರೆಂಬೆ-ಕೊಂಬೆಗಳು ಮುರಿದು ಬಿದ್ದು ವಾಹನಗಳು ಸಂಪೂರ್ಣ ಜಖಂ ಆಗಿವೆ. ಅಂಡರ್ ಪಾಸ್ ಒಳಗೆ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಟ ನಡೆಸಿದ್ದಾರೆ.
ಇಂದು ಕೂಡ ನಗರದಲ್ಲಿ ಮಳೆಯಾಗುವ ಮುನ್ಸೂಚನೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇಂದು ಸಿಲಿಕಾನ್ ಸಿಟಿಯಲ್ಲಿ ಜೋರಾಗಿ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಮರದ ಕೆಳಗೆ ವಾಹನ ಸವಾರರು, ಸಾರ್ವಜನಿಕರು ನಿಲ್ಲುವ ಮುನ್ನ ಎಚ್ಚರಿಕೆ ವಹಿಸಬೇಕು. ಒಣಗಿದ ಮರ, ಕೊಂಬೆ ಬೀಳುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಎಲ್ಲೆಲ್ಲಿ ಎಷ್ಟೆಷ್ಟು ಮಳೆ?
ಬಿಳೇಕಹಳ್ಳಿ- 51mm
ಪುಲಿಕೇಶಿನಗರ- 49mm
ಹೊನ್ನಾರುಪೇಟೆ- 48mm
ಹೊಸಮಾವು- 47mm
ಸಂಪಂಗಿರಾಮನಗರ- 44mm
ಅರಕೆರೆ- 41mm
ಬಾಣಸವಾಡಿ- 39mm
ದೊರೆಸಾನಿಪಾಳ್ಯ- 38mm
ಜಕ್ಕೂರು- 34mm
ಕೋರಮಂಗಲ- 33mm
ಮಾರತಹಳ್ಳಿ- 27mm
ಎಚ್ಎಎಲ್- 26mm
ಆಡುಗೋಡೆ-26mm
ವಿದ್ಯಾಪೀಠ- 21mm ಮಳೆಯಾಗಿದೆ.