ಪ್ರೀತಿ ಮಾಡಬಾರದು ಜಗಕೆ ಹೆದರು ಬಾರದು ಅನ್ನೋದು ಸಿನಿಮಾ ಡೈಲಾಗ್. ಆದ್ರೆ ಇಲ್ಲೊಂದಿಬ್ರು ಪ್ರೇಮಿಗಳು ಲವ್ ಮಾಡಿ ಪೋಷಕರಿಗೆ ಹೆದರಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪೊಲೀಸರ ಸಮ್ಮುಖ ಮದುವೆ ಕೂಡ ಆಗಿದ್ದಾರೆ. ಪುತ್ರಿ ದಿವ್ಯಶ್ರೀ ಮದುವೆ ಒಪ್ಪದ ಪೋಷಕರು ಠಾಣೆ ಎದುರು ಪ್ರತಿಭಟನೆ ಕೂಡ ಮಾಡಿದ್ದಾರೆ. ಚಿಕ್ಕಬಳ್ಲಾಪುರ ಗುಡಿಬಂಡೆಯಲ್ಲಿ ಘಟನೆ ನಡೆದಿದ್ದು, ಯುವತಿಯ ಪೋಷಕರ ವಿರೋಧದ ನಡುವೆ ಪ್ರೇಮ ವಿವಾಹ ನೇರವೇರಿದೆ.
ಹಲವು ದಿನಗಳ ಹಿಂದೆ ಗೌರಿಬಿದನೂರು ತಾಲ್ಲೂಕಿನ ಹಳೇ ಉಪ್ಪಾರಹಳ್ಳಿ ಗ್ರಾಮದ ದಿವ್ಯಶ್ರೀ ಗುಡಿಬಂಡೆ ತಾಲ್ಲೂಕಿನ ಗಂದಂನಾಗೇನಹಳ್ಳಿ ಗ್ರಾಮದ ಮುನಿಆಂಜಿನೇಯ ಲವ್ ಮಾಡಿ ಓಡಿ ಹೋಗಿದ್ರು. ಈ ಬಗ್ಗೆ ಗೌರಿಬಿದನೂರು ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಇದೀಗ ಇಬ್ಬರನ್ನು ಕರೆತಂದಿದ್ದ ಪೊಲೀಸರು ದಲಿತ ಸಂಘಟನೆಗಳ ಸಮ್ಮುಖದಲ್ಲಿ ನಡೆದ ಪ್ರೇಮ ವಿವಾಹಕ್ಕೆ ಮುದ್ರೆ ಒತ್ತಿದ್ದಾರೆ