ಮಾಸಿಕ ಕವಾಯತು ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಕಮೀಷನರ್ ಬಿ. ದಯಾನಂದ ಮಾತನಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿಯಲ್ಲಿ ಉಂಟಾಗಿರುವ ಯುದ್ಧದ ವಾತಾವರಣದ ಬಗ್ಗೆ ಎಲ್ಲಾ ಪೊಲೀಸರಿಗೂ ತಿಳಿದಿದೆ. ಕರ್ತವ್ಯ ನಿರ್ವಹಿಸುವಾಗ ಜಾಗರೂಕತೆಯಿಂದ ಇರಬೇಕು. ಸಾರ್ವಜನಿಕರು ಆತಂಕಕ್ಕೆ ಒಳಗಾಗದ ರೀತಿ ತಿಳುವಳಿಕೆ ನೀಡಬೇಕು. ಸುಳ್ಳು ಸುದ್ದಿ ಹರಡದಂತೆ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ವಾಸ್ತವತೆಯನ್ನು ಸಾರ್ವಜನಿಕರಿಗೆ ತಿಳಿಸಬೇಕು. ಸರಿಯಾದ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಬೇಕು. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ನೋಡುತ್ತಿರುತ್ತೇವೆ. ಅವುಗಳನ್ನು ಅಲ್ಲಗಳೆಯಬೇಕು. ಈ ಸನ್ನಿವೇಶದಲ್ಲಿ ಜನ ಆವೇಶಕ್ಕೆ ಒಳಗಾಗದ ರೀತಿ ನೋಡಿಕೊಳ್ಳಬೇಕು. ಎಲ್ಲ ಡಿಸಿಪಿ, ಎಸಿಪಿಗಳು ನಿಗಾ ವಹಿಸಬೇಕು. ಮನವರಿಕೆ ಮಾಡಬೇಕು. ಮೊದಲು ನಾವು ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು.
ಆ ಬಳಿಕ ಸಾರ್ವಜನಿಕರಿಗೆ ನೀಡಬೇಕು. ಕೇಂದ್ರ,ರಾಜ್ಯ ಸರ್ಕಾರ ಸೂಚನೆ ಪಾಲಿಸಬೇಕು. ಬಹುಮುಖ್ಯವಾಗಿ ಆಗಬೇಕಾದ ಕರ್ತವ್ಯಗಳು. ಮಾಕ್ ಡ್ರಿಲ್ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಗಡಿ ಭಾಗದಲ್ಲಿ ಸಾಕಷ್ಟು ಬೆಳವಣಿಗೆ ನಡೆಯುತ್ತಿದೆ. ಹೀಗಾಗಿ ಸಿಬ್ಬಂದಿಗಳು ಸುಳ್ಳು ಸುದ್ದಿ ಹರಡದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.