ಆರ್ ಸಿಬಿ ವಿಜಯೋತ್ಸವ ಹಲವರ ಪಾಲಿಗೆ ಕರಾಳ ಅಧ್ಯಾಯವಾಗಿ ಪರಿಣಮಿಸಿದೆ.
ನಿನ್ನೆ ನಡೆದ ಕಾಲ್ತುಳಿತದಲ್ಲಿ 20 ವರ್ಷದ ಚಿನ್ಮಯ್ ಶೆಟ್ಟಿ ಪ್ರಾಣತೆತ್ತಿದ್ದಾನೆ. ಕನಕಪುರ ರಸ್ತೆಯ ಖಾಸಗಿ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡ್ತಿದ್ದ ಚಿನ್ಮಯ್ ಶೆಟ್ಟಿ ಇದೀಗ ಬಾರದೂರಿಗೆ ಪಯಣಿಸಿದ್ದಾರೆ. ಮೂಲತ ಹೆಬ್ರಿಯ ಕರುಣಾಕರ ಶೆಟ್ಟಿ ಮತ್ತು ಪೂಜಾ ಶೆಟ್ಟಿ ದಂಪತಿ ಪುತ್ರನಾಗಿರುವ ಚಿನ್ಮಯ್ ಯಕ್ಷಗಾನ ಹಾಗೂ ಬ್ಯಾಸ್ಕೆಟ್ ಬಾಲ್ ನಲ್ಲಿ ಅತ್ಯುತ್ತಮ ಆಟಗಾರನಾಗಿದ್ದ.
ಚಿನ್ಮಯ್ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಮೃತದೇವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದ್ದು, ಕನಕಪುರ ರಸ್ತೆಯಲ್ಲಿರೋ ನಿವಾಸಕ್ಕೆ ಕೊಂಡೊಯ್ಯಲಾಗಿದೆ.