ಬೆಂಗಳೂರು ; ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡದ ಗೆಲುವಿನ ಹಿಂದಿನ ಪ್ರಮುಖ ಕಾರಣಗಳಲ್ಲಿ ಆಲ್ರೌಂಡರ್ ಅಕ್ಷರ್ ಪಟೇಲ್ ಕೂಡ ಒಬ್ಬರು. ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ (ಮಾರ್ಚ್ 2) ಉಭಯ ತಂಡಗಳ ನಡುವಿನ ಪಂದ್ಯ ನಡೆದಿದ್ದು ಅಕ್ಷರ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ಅಕ್ಷರ್ ಪಟೇಲ್ ಬ್ಯಾಟ್, ಬಾಲ್ ಮತ್ತು ಮೈದಾನದಲ್ಲಿ ಫೀಲ್ಡಿಂಗ್ ಮೂಲಕ ಭಾರತಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ರೋಹಿತ್ ಶರ್ಮಾ ನೇತೃತ್ವದ ತಂಡವು ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಎಲ್ಲಾ ಮೂರು ಪಂದ್ಯಗಳನ್ನು ಗೆಲ್ಲಲು ಮತ್ತು ಲೀಗ್ ಹಂತವನ್ನು ಅಜೇಯವಾಗಿ ಕೊನೆಗೊಳಿಸಲು ಅಕ್ಷರ್ ಕಾರಣರಾಗಿದ್ದಾರೆ.
ಬ್ಯಾಟ್ ಮತ್ತು ಬಾಲ್ ಮೂಲಕ ಮಿಂಚಿದ್ದರು
ಭಾರತ ಕ್ರಿಕೆಟ್ ತಂಡವು 30 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ವೇಳೆ ಅಕ್ಷರ್ 42 ರನ್ಗಳ ಅಮೂಲ್ಯ ಇನ್ನಿಂಗ್ಸ್ ಕಟ್ಟಿದ್ದರು. ಎಡಗೈ ಬ್ಯಾಟ್ಸ್ಮನ್, ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್ ಅವರೊಂದಿಗೆ ನಾಲ್ಕನೇ ವಿಕೆಟ್ಗೆ 98 ರನ್ಗಳ ಜತೆಯಾಟ ಆಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದರು.
ಬೌಲಿಂಗ್ನಲ್ಲಿ ಅಕ್ಷರ್ ಅವರು ದುಬಾರಿ ಎನಿಸಿದರೂ ಕೇನ್ ವಿಲಿಯಮ್ಸನ್ ಅವರ ವಿಕೆಟ್ ಪಡೆದಿದ್ದರು. ಅಷ್ಟೇ ಅಲ್ಲ, ಆಲ್ರೌಂಡರ್ ರಚಿನ್ ರವೀಂದ್ರ ಅವರ ಕ್ಯಾಚ್ ಹಿಡಿದು ಭಾರತಕ್ಕೆ ಮೊದಲ ವಿಕೆಟ್ ತಂದುಕೊಟ್ಟಿದ್ದರು.
ಗಾಯದ ಸಮಸ್ಯೆ
ಅಕ್ಷರ್ ಪಟೇಲ್ ಪಂದ್ಯದ ನಂತರ ಗಾಯಕ್ಕೆ ಒಳಗಾದಂತೆ ಕಂಡಿತು. ಇದು ಆಲ್ರೌಂಡರ್ ತನ್ನ ಮೊಣಕಾಲಿಗೆ ಐಸ್ ಪ್ಯಾಕ್ ಧರಿಸಿರುವುದು ಕಂಡುಬಂತು. ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ನ್ಯೂಜಿಲೆಂಡ್ ಪಂದ್ಯದ ನಂತರ ಅತ್ಯುತ್ತಮ ಫೀಲ್ಡಿಂಗ್ ಪದಕ ನೀಡುವ ವೇಳೆ ಇದು ಗಮನಕ್ಕೆ ಬಂದಿದೆ.
ರಚಿನ್ ರವೀಂದ್ರ ಅವರನ್ನು ಔಟ್ ಮಾಡಿದ ಕ್ಯಾಚ್ಗಾಗಿ ಅಕ್ಷರ್ ಪಟೇಲ್ ಉತ್ತಮ ಫೀಲ್ಡರ್ ಪ್ರಶಸ್ತಿ ಗೆದ್ದರು. ವಿರಾಟ್ ಕೊಹ್ಲಿ ಎರಡನೇ ನಾಮನಿರ್ದೇಶಿತರಾಗಿದ್ದರೆ, ಶ್ರೇಯಸ್ ಅಯ್ಯರ್ ಕೂಡ ಮೈದಾನದಲ್ಲಿ ತಮ್ಮ ವೀರೋಚಿತ ಪ್ರದರ್ಶನ ನೀಡಿದ್ದರು.
ಉತ್ತಮ ಫೀಲ್ಡಿಂಗ್ಗೆ ಶ್ಲಾಘನೆ
ಭಾರತದ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರು. ವಿಶೇಷವಾಗಿ ಡ್ಯಾರಿಲ್ ಮಿಚೆಲ್ ಬ್ಯಾಟಿಂಗ್ ಮಾಡುವಾಗ ಭಾರತ ಆಟಗಾರರ ನೀಡಿದ ಫೀಲ್ಡಿಂಗ್ ಪ್ರದರ್ಶನವನ್ನು ಶ್ಲಾಘಿಸಿದರು. ನ್ಯೂಜಿಲ್ಯಾಂಡ್ ಬ್ಯಾಟರ್ಗಳಿಗೆ ರನ್ ಮಾಡಲು ಬಿಡದೇ ಇರುವ ಸಂದರ್ಭವನ್ನು ಅವರು ಸ್ಮರಿಸಿದರು.
“ನಾವು ಯಾವಾಗಲೂ ಉತ್ತಮ ಫೀಲ್ಡಿಂಗ್ ಘಟಕವಾಗುವುದರ ಬಗ್ಗೆ ಮಾತನಾಡುತ್ತೇವೆ. ಜತೆಗೆ ಹೇಗೆ ಸಕ್ರಿಯರಾಗಿದ್ದೇವೆ ಎಂಬುದು ಮುಖ್ಯ. ನಾನು ಆಟದ ವಿವಿಧ ಹಂತಗಳನ್ನು ಗಮನಿಸಿದೆ. ವಿಶೇಷವಾಗಿ ಮಿಚೆಲ್ ಬ್ಯಾಟ್ ಮಾಡುವಾಗ ಅವರಿಗೆ ರನ್ ಮಾಡಲು ಬಿಡದಿರುವುದು ಅತ್ಯುತ್ತಮ ಪ್ರದರ್ಶನ ಎಂದರು.