ಬೆಂಗಳೂರು, ಏಪ್ರಿಲ್ 19: ತ್ರಿಪುರಾದ ಅಗರ್ತಲಾದ ಮಲಾಂಚ ನಿವಾಸದಲ್ಲಿ ಏಪ್ರಿಲ್ 12 ರಿಂದ 18 ರವರೆಗೆ ನಡೆದ ಏಷ್ಯನ್ 14 ಮತ್ತು ಅಂಡರ್ ರ್ಯಾಂಕಿಂಗ್ ಜೂನಿಯರ್ ಟೆನಿಸ್ ಟೂರ್ನಮೆಂಟ್ 2025 ರ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗದಲ್ಲಿ ಪದ್ಮಪ್ರಿಯಾ ರಮೇಶ್ ಕುಮಾರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಪಂದ್ಯಾವಳಿಯಲ್ಲಿ ಅವರ ಅತ್ಯುತ್ತಮ ಪ್ರದರ್ಶನವು ಅವರನ್ನು 14 ವರ್ಷದೊಳಗಿನ ಅಖಿಲ ಭಾರತ 7 ನೇ ಶ್ರೇಯಾಂಕದ ಆಟಗಾರ್ತಿಯಾಗಿ ಮುನ್ನಡೆಸಿದೆ. ಮತ್ತು ಏಷ್ಯಾದಲ್ಲಿ 37ನೇ ಸ್ಥಾನಕ್ಕೇರಿದೆ. ಮೈಸೂರಿನ ಎಕ್ಸೆಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯಾಗಿರುವ ಇವರು ಮೈಸೂರಿನ ಎನ್.ಪಿ.ರಘುವೀರ್ ಪೊನ್ನುಸ್ವಾಮಿ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಮೈಸೂರಿನ ಎಕ್ಸೆಲ್ ಪಬ್ಲಿಕ್ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಾರೆ.
ಪದ್ಮಪ್ರಿಯಾ ಅವರು ಮೈಸೂರಿನ ಅರಣ್ಯ ಸಂರಕ್ಷಣಾಧಿಕಾರಿ (ಹುಲಿ ಯೋಜನೆ) ಐಎಫ್ಎಸ್ ಡಾ.ರಮೇಶ್ ಕುಮಾರ್ ಪಿ ಮತ್ತು ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ (ಮೈಸೂರು ವೃತ್ತ) ಡಾ.ಮಾಲತಿ ಪ್ರಿಯಾ ಎಂ ಅವರ ಪುತ್ರಿ