ಬೆಂಗಳೂರು: ಸಿಎಂ ಮಾಜಿ ಕಾರ್ಯದರ್ಶಿ ಗೋವಿಂದ್ ರಾಜ್ ಗೆ ಮತ್ತೊಂದು ಶಾಕ್ ಎದುರಾಗಿದೆ. ಈಗ ಗೋವಿಂದ್ ರಾಜ್ ರನ್ನು ರಾಜ್ಯ ಒಲಿಂಪಿಕ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ತಯಾರಿ ನಡೆಸಲಾಗುತ್ತಿದೆ.
ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಘಟನೆಗೆ ಗೋವಿಂದ್ ರಾಜ್ ಕೂಡ ಹೊಣೆಗಾರರು. ಅವರಿಂದಾಗಿಯೇ 11 ಜನ ಅಮಾಯಕರು ಸಾವನ್ನಪ್ಪುವಂತಾಯಿತು ಎಂದು ಕ್ರೀಡಾಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಿದದಾರೆ. ಆರ್ ಸಿಬಿ ಸಂಭ್ರಮಾಚರಣೆ ಬೇಡ ಎಂದು ಪೊಲೀಸರು ಸಲಹೆ ನೀಡಿದ್ದರು. ಆದರೆ, ಕಾರ್ಯಕ್ರಮ ಮಾಡಲು ಸಿಎಂ ಕಾರ್ಯದರ್ಶಿಯಾಗಿದ್ದ ಗೋವಿಂದ್ ರಾಜ್ ಒತ್ತಾಯ ಮಾಡಿದ್ದರು ಎನ್ನಲಾಗಿದೆ.
ಇದರಿಂದಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ಈ ಹಿನ್ನೆಲೆಯಲ್ಲಿ ಸಿಎಂ ಕಾರ್ಯದರ್ಶಿ ಹುದ್ದೆ ಯಿಂದ ಕಿಕ್ ಹೌಟ್ ಕೂಡ ಮಾಡಲಾಗಿದೆ. ಇನ್ನೊಂದೆಡೆ ಒಲಿಂಪಿಕ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಕೂಡ ಕ್ರೀಡಾ ಪ್ರೇಮಿಗಳು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಇವರಿಂದಾಗಿ 11 ಜನ ಕ್ರೀಡಾ ಪ್ರೇಮಿಗಳು ಸಾವನ್ನಪ್ಪಿದ್ದಾರೆ. ಇವರಿಂದ ಕ್ರೀಡಾ ಪ್ರೇಮಿಗಳಿಗೆ ಬೇಸರ ಅಗಿದೆ. ಕೂಡಲೇ ಒಲಿಂಪಿಕ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಅಂತ ಅಭಿಯಾನ ಆರಂಭವಾಗಿದೆ. ಈ ಕುರಿತು ಸಿಎಂಗೆ ಕ್ರೀಡಾ ಪ್ರೇಮಿಗಳು ಮನವಿ ಮಾಡಲು ಮುಂದಾಗಿದ್ದಾರೆ.