ತಹಾವೂರ್ ರಾಣಾನನ್ನು ಭಾರತ ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಎನ್ ಐಎ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ತಹಾವೂರ್ ಹುಸೇನದ ಹಸ್ತಾಂತರವನ್ನ ಭಾರತ ಯಶಸ್ವಿಯಾಗಿಸಿದೆ. 26/11 ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ರಾಣಾ ಹಸ್ತಾಂತರಕ್ಕೆ ಅಮೆರಿಕಾ ಕೋರ್ಟ್ ಆದೇಶಿಸಿತ್ತು. 2023ರ ಮೇ. 16ರಂದು ಕ್ಯಾಲಿಫೋರ್ನಿಯಾದ ಸೆಂಟ್ರಲ್ ಡಿಸ್ಟ್ರಿಕ್ಟ್ನ ಜಿಲ್ಲಾ ನ್ಯಾಯಾಲಯ ಆದೇಶ ನೀಡಿತ್ತು. ನಂತರ ರಾಣಾ ಈ ಕುರಿತು ಹಲವು ಮೊಕದ್ದಮೆಗಳನ್ನು ಹೂಡಿದ್ದ. ಆತ ಒಂಬತ್ತನೇ ಸರ್ಕ್ಯೂಟ್ ಕೋರ್ಟ್ ಆಫ್ ಅಪೀಲ್ಸ್ನಲ್ಲಿ ಮೊಕದ್ದಮೆಗಳನ್ನ ಹೂಡಿದ್ದ. ಆ ಎಲ್ಲ ಅರ್ಜಿಗಳನ್ನು ಅಲ್ಲಿನ ನ್ಯಾಯಾಲಯದಿಂದ ತಿರಸ್ಕರಿಸಿದೆ.
ಆನಂತರ ನಂತರ ಸರ್ಷಿಯೊರಾರಿ ರಿಟ್ ಅರ್ಜಿ, ಎರಡು ಹೇಬಿಯಸ್ ಅರ್ಜಿಗಳು ಮತ್ತು ಯುಎಸ್ ಸುಪ್ರೀಂ ಕೋರ್ಟ್ನಲ್ಲಿ ತುರ್ತು ಅರ್ಜಿಯನ್ನು ಸಲ್ಲಿಸಿದ್ದ. ಅವುಗಳು ಸಹ ಯು ಎಸ್ ನ್ಯಾಯಾಲಯದಿಂದ ತಿರಸ್ಕೃತಗೊಂಡವು. ಶರಣಾಗತಿ ವಾರಂಟ್ ಪಡೆದ ನಂತರ ಎರಡೂ ದೇಶಗಳ ನಡುವೆ ಹಸ್ತಾಂತರ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿತ್ತು. ಭಾರತವು ಅಂತಿಮವಾಗಿ ಯುಎಸ್ ನಿಂದ ಭಯೋತ್ಪಾದಕನನ್ನು ಹಸ್ತಾಂತರಿಸಿಕೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.