ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೃದಯಾಘಾತವಾಗಿದೆ. ಈ ಮೂಲಕ ಸ್ಯಾಂಡಲ್ ವುಡ್ ಗೆ ಮತ್ತೆ ಶಾಕ್ ಎದುರಾಗಿದೆ.
ಸಂಚಾರಿ ವಿಜಯ್ ನಟನೆಯ ಮೇಲೊಬ್ಬ ಮಾಯಾವಿ ಸಿನಿಮಾ ನಿರ್ಮಾಪಕ ಭರತ್ ಕುಮಾರ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅವರಿಗೆ 43 ವರ್ಷ ವಯಸ್ಸಾಗಿತ್ತು.
ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಟನೆಯ ಮೇಲೊಬ್ಬ ಮಾಯಾವಿ ಚಿತ್ರವನ್ನು ನಿರ್ಮಿಸಿದ್ದ ಭರತ್ ಮೂಲತಃ ಪುತ್ತೂರಿನವರು. ಚಂದನವನದಲ್ಲಿ ಪುತ್ತೂರು ಭರತ್ ಅಂತಲೇ ಕರೆಸಿಕೊಳ್ಳುತ್ತಿದ್ದ ಅವರು, ಕಂಬಳ ಕೂಟದ ಸದಸ್ಯರೂ ಹೌದು. ಮೃತ ಭರತ್, ಮಗ ನಿಹಾರ್ ಮತ್ತು ಮಗಳು ಹಂಸಿಕಾ, ಪತ್ನಿ ರವಿಕಲಾ ಅವರನ್ನ ಅಗಲಿದ್ದಾರೆ. ಅಮ್ಮ, ಸಹೋದರ ಆದರ್ಶ, ಸಹೋದರಿ ಸೌಮ್ಯ ಹಾಗೂ ಅಪಾರ ಬಂಧು ಬಳಗವೀಗ ಶೋಕಸಾಗರದಲ್ಲಿ ಮುಳುಗಿದೆ.