ಹಾವೇರಿ: ಮಲೆನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ಅಂಬಿಗರ ಚೌಡಯ್ಯ ಗದ್ದುಗೆ ಮುಳುಗಡೆಯಾಗಿದೆ.
ಚೌಡಯ್ಯದಾನಪುರ ಗ್ರಾಮದಲ್ಲಿನ ಅಂಬಿಗರ ಚೌಡಯ್ಯ ಗದ್ದುಗೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಹಾವೇರಿ ಜಿಲ್ಲೆ ರಾಣೆಬೇನ್ನೂರು ತಾಲೂಕಿನ ಚೌಡಯ್ಯದಾನಪುರದಲ್ಲಿನ ತುಂಗಭದ್ರಾ ನದಿಯ ತಟ್ಟದಲ್ಲಿರುವ ಅಂಬಿಗರ ಚೌಡಯ್ಯ ಗದ್ದುಗೆ ಸಂಪೂರ್ಣವಾಗಿ ಮುಳುಗಡೆಯಾಗಿದೆ.
ಗದ್ದುಗೆ ಮುಳುಗಡೆ ಆಗಿರುವುದರಿಂದ ಭಕ್ತರಿಗೆ ಪೂಜೆ ಮಾಡಲು ತೊಂದರೆಯಾಗಿದೆ. ಪ್ರತಿ ವರ್ಷವೂ ತುಂಗಭದ್ರಾ ನದಿ ನೀರಿಗೆ ದೇಗುಲ ಮುಳುಗಡೆಯಾಗುತ್ತದೆ. ಹೀಗಾಗಿ ಅಂಬಿಗರ ಚೌಡಯ್ಯ ಗದ್ದುಗೆ ಅಭಿವೃದ್ಧಿಗೆ ಭಕ್ತರು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಶಾಶ್ವತ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಭಕ್ತರು ಒತ್ತಾಯಿಸಿದ್ದಾರೆ.