ಹಾವೇರಿ: ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ಗುತ್ತಿಗೆದಾರ ಶಿವಾನಂದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ A1 ಆರೋಪಿ ನಾಗರಾಜ್ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
ಬೆಂಕಿಯ ಕೆನ್ನಾಲೆಗೆ ಆರೋಪಿ ನಾಗರಾಜ್ ಮನೆ ಧಗ ಧಗಿಸಿ ಉರಿದಿದೆ. ಅದೃಷವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸದ್ಯ ಶಿಗ್ಗಾವಿ ಅಗ್ನಿಶಾಮಕ ದಳ ಪೊಲೀಸರಿಂದ ಕಾರ್ಯಚರಣೆ ನಡೆಸಲಾಗಿದೆ. ಗುತ್ತಿಗೆದಾರನ ಹತ್ಯೆಯಿಂದ ಶಿಗ್ಗಾವಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಹಾವೇರಿಯ ಶಹರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.