ಬೆಂಗಳೂರು: ಫುಟ್ಪಾತ್ ಮೇಲೆ ನಿಲ್ಲಿಸಿದ್ದ ಸ್ಕೂಟಿಯನ್ನು ಖದೀಮನೊಬ್ಬ ರಾಜಾರೋಷವಾಗಿ ಎಗರಿಸಿರುವ ಘಟನೆ ನಡೆದಿದೆ.
ಕೆ.ಆರ್. ಮಾರುಕಟ್ಟೆ ಬಳಿ ಶುಕ್ರವಾರ ರಾತ್ರಿ 8.11ರ ಸುಮಾರಿಗೆ ಈ ಘಟನೆ ನಡೆದಿದೆ. ಖತರ್ನಾಕ್ ಕಳ್ಳನ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎಸ್.ಜೆ.ಪಿ ರಸ್ತೆಯ ಫುಟ್ಬಾತ್ ನ ಮೇಲೆ ಅಕ್ಸೆಸ್ ಬೈಕ್ ನಿಲ್ಲಿಸಲಾಗಿತ್ತು. ಈ ವೇಳೆ ಖದೀಮ ಸ್ಕೂಟರ್ ಮೇಲೆ ರಾಜರೋಷವಾಗಿ ಹೋಗಿ ಕುಳಿತುಕೊಂಡಿದ್ದಾನೆ. ಆನಂತರ ಜನ ಇಲ್ಲದನ್ನು ನೋಡಿ ಲಾಕ್ ಮುರಿದು ಕದ್ದು ಪರಾರಿಯಾಗಿದ್ದಾನೆ.
ಘಟನೆ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.