ನಾವು ಬದಲಾಗಿದ್ದೇವೆ. ಇದು 21ನೇ ಶತಮಾನದ ಭಾರತ. ಆಧುನಿಕ ಭಾರತದ ತಂಟೆಗೆ ಬಂದ್ರೆ ಶಾಸ್ತಿ ಕಟ್ಟಿಟ್ಟ ಬುತ್ತಿ ಅನ್ನೋದನ್ನು ಋಜುವಾತು ಮಾಡಲಾಗಿದೆ.
ಬಿಹಾರದ ಮಣ್ಣಿನಿಂದ ಅಂದು ಪಹಲ್ಗಾಮ್ ರಾಕ್ಷಸರಿಗೆ ಸಂದೇಶ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳ ಧಮನಿ ಧಮನಿಯಲ್ಲಿ ಕುದಿಯುತ್ತಿದ್ದ ಪ್ರತೀಕಾರವನ್ನು ಆಪರೇಷನ್ ಸಿಂಧೂರ ಹೆಸರಿನಲ್ಲಿ ತೀರಿಸಿಕೊಂಡಿದ್ದಾರೆ.
ಮಧ್ಯರಾತ್ರಿ 1.44….ಸೊಂಪಾದ ನಿದ್ರೆಗೆ ಜಾರಿದ್ದ ಸಮಸ್ತ ಪಾಕಿಸ್ತಾನ ಧುತ್ ಎಂದು ಎದ್ದುಕೂತಿತ್ತು…ಪರಮಪಾಪಿ ಪಾಕ್ ಎಂದಿಗೂ ಊಹಿಸದ ಘಟನೆ ಕಡೆಗೂ ನಡೆದೇಬಿಟ್ಟಿದೆ. ಒಬ್ಬೊಬ್ಬರನ್ನೂ ಹುಡುಕಿ ಹೊಡೀತಿವಿ ಅಂತಾ ಮಾತುಕೊಟ್ಟವರ ಪ್ರತೀಕಾರ ಜ್ವಾಲಾಮುಖಿಯಾಗಿ ಸ್ಫೋಟಿಸಿತ್ತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿಕ ಕಾಶ್ಮೀರದ 9 ಸ್ಥಳಗಳನ್ನು ಟಾರ್ಗೆಟ್ ಮಾಡಿದ್ದ ಭಾರತೀಯ ಸೇನೆ ಗುಂಡಿನ ಸುರಿಮಳೆಗೈದಿದೆ. ಅಷ್ಟೇ…ನೋಡನೋಡುತ್ತಿದ್ದಂತೆ ಹೆದರಿ ಬಿಲ ಸೇರಿದ್ದ ಜಿಹಾದಿ ಹೆಗ್ಗಣಗಳು ಇದ್ದಲ್ಲೇ ಸುಟ್ಟು ಬೂದಿಯಾಗಿವೆ. ಆಪರೇಷನ್ ಸಿಂಧೂರ ನವ ಭಾರತದ ಪ್ರತಿಬಿಂಬವಾಗಿ ಪ್ರಜ್ವಲಿಸಿದೆ.
ಆಪರೇಷನ್ ಸಿಂಧೂರದಲ್ಲಿ ಸೇನೆಯ 3 ಪಡೆಗಳೂ ಭಾಗಿ
ಉಗ್ರರ ಸಮಾಧಿ ಕಟ್ಟಲು ಭಾರತ ಆರಂಭಿಸಿದ್ದೇ ಆಪರೇಷನ್ ಸಿಂಧೂರ. ಪಹಲ್ಗಾಮ್ ನಲ್ಲಿ ಅದೆಷ್ಟೋ ಹೆಣ್ಣುಮಕ್ಕಳ ಸಿಂಧೂರವನ್ನು ಕಸಿದ ರಕ್ಕಸರ ಬೇಟೆಯಾಡಲು ಇದೇ ಸಿಂಧೂರವನ್ನೇ ಅಸ್ತ್ರವಾಗಿಸಿಕೊಂಡ ಭಾರತ ವೀರ ವನಿತೆಯರ ಬಲಿದಾನಕ್ಕೆ ನ್ಯಾಯ ಕೊಡಿಸಿದೆ. ಭಾರತದ ವಾಯು, ನೌಕಾಪಡೆ ಮತ್ತು ಸೇನೆ ಜಂಟಿಯಾಗಿ ಪಾಕ್ ವಿರುದ್ಧ ಸಂಗ್ರಾಮ ಸಾರಿದ್ದು, ದಶಕಗಳಿಂದ ಬಿಡಾರ ಹೂಡಿ ಕೂತಿದ್ದ ಉಗ್ರರನ್ನು ಸಂಹರಿಸಲಾಗಿದೆ.
ಒಂಭತ್ತು ಸ್ಥಳಗಳನ್ನು ಟಾರ್ಗೆಟ್ ಮಾಡಿ ಅಟ್ಯಾಕ್
ಆಪರೇಷನ್ ಸಿಂಧೂರವನ್ನು ಪಕ್ಕಾ ಪ್ಲ್ಯಾನ್ ಮಾಡಿಯೇ ರೂಪಿಸಲಾಗಿತ್ತು. ಭಾರತೀಯ ಗುಪ್ತಚರ ಇಲಾಖೆಯ ನಿಗದಿತ ಮಾಹಿತಿ ಆಧರಿಸಿ ಟಾರ್ಗೆಟ್ ಗಳನ್ನು ಲಾಕ್ ಮಾಡಲಾಗಿತ್ತು. ಅಷ್ಟೇ, ಮಂಗಳವಾರ ಮಧ್ಯರಾತ್ರಿ ಬಾನಿಗೆ ನೆಗೆದ ಭಾರತೀಯ ಯುದ್ಧ ವಿಮಾನಗಳು 9 ಸ್ಥಳಗಳನ್ನು ಧ್ವಂಸಗೊಳಿಸಿವೆ. ಪಾಕಿಸ್ಥಾನದ 4 ಉಗ್ರರ ಅಡ್ಡೆಗಳು ಛಿದ್ರವಾಗಿದ್ರೆ, ಪಾಕ್ ಆಕ್ರಮಿಕ ಕಾಶ್ಮೀರದ 5 ಸ್ಥಳಗಳನ್ನು ಚಿಂದಿ ಉಡಾಯಿಸಲಾಗಿದೆ.ಅದ್ರಲ್ಲೂ ಲಶ್ಕರ್ ಎ ತೋಯ್ಬಾ ಹಾಗೂ ಜೈಶ್ ಎ ಮೊಹಮ್ಮದ್ ನ ಬೇಸ್ ಕ್ಯಾಂಪ್ ಗಳೇ ಸೇನೆಯ ಅಟ್ಟಹಾಸಕ್ಕೆ ಸುಟ್ಟು ಕರಕಲಾಗಿವೆ.
70 ಉಗ್ರರನ್ನು ಸದೆಬಡಿದ ಭಾರತೀಯ ಸೇನೆ
ಆಪರೇಷನ್ ಸಿಂಧೂರದ ಅಟ್ಟಹಾಸ ರಕ್ತಪಾತವನ್ನೇ ಕಸುಬಾಗಿಸಿಕೊಂಡವರ ನೆತ್ತರನ್ನು ಕಕ್ಕಿಸಿದೆ. ಧರ್ಮದ ಹೆಸರಲ್ಲಿ ನರಮೇಧ ನಡೆಸಿದ್ದ ಕಟುಕರ ಎದೆಯನ್ನೇ ಈಗ ಬಗೆಯಲಾಗಿದೆ. ಅಮಾಯಕರ ನೆತ್ತರು ಹೀರಿದ ರಾಕ್ಷಸರ ದೇಹಗಳೂ ಈಗ ಛಿದ್ರಛಿದ್ರವಾಗಿವೆ. ಭಾರತೀಯ ಸೇನೆಯ ದಾಳಿಗೆ 70ಕ್ಕೂ ಹೆಚ್ಚು ಮಂದಿ ಉಗ್ರರು ಸುಟ್ಟು ಬೂದಿಯಾಗಿದ್ದಾರೆ. ಈ ಮೂಲಕ ಸಮಸ್ತ ಭಾರತೀಯರು ಸೇನೆಯ ಅಪರೇಷನ್ ಸಿಂಧೂರವನ್ನು ಸಾಕಾರಗೊಳಿಸಿದ ಪ್ರತಿಯೊಬ್ಬರಿಗೂ ಜೈ ಹಿಂದ್ ಹೇಳುತ್ತಿದೆ.