ಮಂಡ್ಯ: ರಾಜ್ಯದಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಇದೀಗ ಸತತ ಮಳೆಗೆ ದೇಗುಲದ ಮೇಲೆ ಮರ ಉರುಳಿ ಬಿದ್ದಿರುವ ಘಟನೆ ನಡೆದಿದೆ.
ಮಂಡ್ಯದ ಪಾಂಡವಪುರ ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇತ್ತೀಚೆಗಷ್ಟೆ ಲಕ್ಷಾಂತರ ರೂ ವೆಚ್ಚದಲ್ಲಿ ದೇವಾಲಯದ ಜೀರ್ಣೋದ್ಧಾರ ಮಾಡಲಾಗಿತ್ತು. ಚೆನ್ನಿಗರಾಯ ದೇಗುಲದ ಗೋಪುರ ಸೇರಿ ಗೋಪುರದ ವಿಗ್ರಹ ಬಿರುಕು ಬಿಟ್ಟಿದೆ. ಮಳೆ ಗಾಳಿಗೆ ದೇಗುಲದ ಗೋಪುರ ಸೇರಿ ವಿಗ್ರಹ ಭಿನ್ನವಾಗಿದೆ. ಇದರಿಂದಾಗಿ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.