ಕೊಪ್ಪಳ: ರಸ್ತೆ ಬದಿ ಗಿಡಗಳಿಗೆ ನೀರು ಹಾಕುತ್ತಿರುವ ಟ್ಯಾಂಕರ್ ಗೆ ಆಯಿಲ್ ತುಂಬಿದ ಟ್ಯಾಂಕರ್ ಡಿಕ್ಕಿ ಹೊಡೆದ ಘಟನೆ ನಡೆದಿದೆ.

ಡಿಕ್ಕಿ ರಭಸಕ್ಕೆ ಟ್ಯಾಂಕರ್ ಲಾರಿಯಲ್ಲಿಯೇ ಡ್ರೈವರ್ ಸಿಲುಕಿ ಒದ್ದಾಡಿದ್ದಾರೆ. ಸ್ಥಳೀಯರು ಚಾಲಕನನ್ನು ಹೊರ ತೆಗೆಯಲು ಕಷ್ಟ ಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ತಳಕಲ್- ಬನ್ನಿಕೊಪ್ಪ ಮಾರ್ಗ ಮಧ್ಯೆ ಈ ಘಟನೆ ನಡೆದಿದೆ. ಘಟನೆಯಲ್ಲಿ ತಮಿಳುನಾಡು ಮೂಲದ ಡ್ರೈವರ್ ಗೆ ಗಂಭೀರ ಗಾಯಗಳಾಗಿವೆ.
ಆಯಿಲ್ ಟ್ಯಾಂಕರ್ ಚಲಾಯಿಸುತ್ತಿದ್ದ ಚಾಲಕ ಸಿಲುಕಿ ನರಳಾಡಿದ್ದಾರೆ. ಸ್ಥಳಕ್ಕೆ ಕುಕನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.