ಬೆಂಗಳೂರು: ಪ್ರಾಣಿಗಳಲ್ಲಿ ಬುದ್ಧಿ ಜೀವಿ ಅಂದ್ರೆ ಅದು ಮನುಷ್ಯ. ಈ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಈಗಾಗಲೇ ಎಲ್ಲವನ್ನು ದುರುಪಯೋಗ ಪಡಿಸಿಕೊಂಡು ಪ್ರಕೃತಿಯ ವಿನಾಶಕ್ಕೆ ಕಾರಣವಾಗುತ್ತಿದ್ದಾನೆ.
ಈಗಿನ ಕಾಲದಲ್ಲಿ ಮನುಷ್ಯರಿಗೆ ಸ್ವಲ್ಪವೂ ಕರುಣೆ ಮಾನವೀಯತೆ ಎನ್ನುವುದು ಇಲ್ಲವಾಗಿದೆ. ಮೂಕ ಪ್ರಾಣಿಗಳ ಜೊತೆ ದರ್ಪ ತೋರುತ್ತಾ ಬೀಗುತಿರುತ್ತಾನೆ. ಅದೇ ರೀತಿ ಇಲ್ಲೊಬ್ಬ, ನವಜಾತ ಮರಿಗಳನ್ನು ಎತ್ತಿ ಎತ್ತಿ ನೆಲಕ್ಕೆ ಬಡೆದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲಾದ ವಿಡಿಯೋದಲ್ಲಿ ಅಪಾರ್ಟ್ಮೆಂಟ್ ನೆಲಮಾಳಿಗೆಯಲ್ಲಿ ವ್ಯಕ್ತಿಯೊಬ್ಬ ನಾಯಿ ಜೊತೆಗೆ ಓಡಾಡುತ್ತಿರುವುದನ್ನು ನೋಡಬಹುದು. ಈ ವೇಳೆ ನಾಯಿಮರಿಗಳ ಹತ್ತಿರ ಹೋಗಿ ನಾಯಿಮರಿಗಳನ್ನು ಎತ್ತಿಕೊಂಡು ನೆಲಕ್ಕೆ ಹೊಡೆದು, ಕಲ್ಲಿನಿಂದ ಜಜ್ಜುತ್ತಿರುವುದನ್ನು ಕಂಡಿದೆ. ಅಷ್ಟೇ ಅಲ್ಲದೇ, ಆ ನಾಯಿಮರಿಗಳು ಸತ್ತಿದೆಯೇ ಎಂದು ನೋಡಿ ಮತ್ತೆ ಕೈಯಿಂದ ಗುದ್ದುತ್ತಿದ್ದಾನೆ. ಈ ವೇಳೆಯಲ್ಲಿ ತಾಯಿ ನಾಯಿಯೊಂದು ಅತ್ತಿಂದ ಇತ್ತ ಓಡಾಡುತ್ತಿರುವುದನ್ನು ಕಾಣಬಹುದು.