ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಸಾವಿನ ಸರಣಿ ಮತ್ತೆ ಮುಂದುವರೆದಿದೆ. ಹಠಾತ್ ಹೃದಯಾಘಾತಕ್ಕೆ 51 ವರ್ಷದ ಮಂಜುನಾಥ್ ಎಂಬುವವರು ಸಾವನ್ನಪ್ಪಿದ್ದಾರೆ.
ಮೂಲತಃ ಆಲೂರು ತಾಲ್ಲೂಕಿನ, ಬಾವಿಕೊಪ್ಪಲು ಗ್ರಾಮದ ಮಂಜುನಾಥ್ ಹಾಸನದ ಖಾಸಗಿ ಆಸ್ಪತ್ರೆಯ ವೈದ್ಯರ ಕಾರಿನ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ರಾತ್ರಿವೇಳೆ ಮನೆಯಲ್ಲಿದ್ದಾಗ ಮಂಜುನಾಥ್ಗೆ ಎದೆನೋವು ಕಾಣಿಸಿಕೊಂಡಿದೆ.
ಆಸ್ಪತ್ರೆಗೆ ದಾಖಲಾಗಿದ್ದ ಮಂಜುನಾಥ್ಗೆ ಆಸ್ಪತ್ರೆಯ ಸಿಬ್ಬಂದಿ ಇಸಿಜಿ ಮಾಡಿ ವೈದ್ಯರಿಗೆ ಕರೆ ಮಾಡಿದ್ದರು, ವೈದ್ಯರು ಬರುವಷ್ಟರಲ್ಲಿ ಕುರ್ಚಿಯ ಮೇಲೆ ಹೃದಯಾಘಾತದಿಂದ ಮಂಜುನಾಥ್ ಸಾವನ್ನಪ್ಪಿದ್ದಾರೆ. ಅಲ್ಲದೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಹಾಸನ ಜಿಲ್ಲೆಯಲ್ಲಿ ಹದಿನೈದು ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇನ್ನು ಹೃದಯಾಘಾತ ಪ್ರಕರಣಗಳಿಂದ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ.