ಬೆಂಗಳೂರು: ನಿವೃತ್ತ ಸೈನಿಕರೊಬ್ಬರನ್ನು (Retired Soldier ) ಅವರ ಪುತ್ರನೇ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಡೆದಿದೆ.
ವಿವೇಕನಗರ (Viveknagar) ಬಸ್ ನಿಲ್ದಾಣದ ಹಿಂಭಾಗದಲ್ಲಿ ಈ ಘಟನೆ ನಡೆದಿದೆ. ಇಸ್ಲಾಂ ಅರಬ್ (47) ಹತ್ಯೆಯಾಗಿರುವ ದುರ್ದೈವ ತಂದೆ. ಬೋಲು ಅರಬ್ ಹತ್ಯೆ ಮಾಡಿದ ಪಾಪಿ ಮಗ ಎನ್ನಲಾಗಿದೆ. ಈ ಘಟನೆ ಶನಿವಾರ ಮಧ್ಯರಾತ್ರಿ ನಡೆದಿದೆ. ಆರೋಪಿ ತನ್ನ ತಂದೆಗೆ ಕೈನಿಂದ ಹೊಡೆದು, ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ತಂದೆ ಸ್ಟ್ರಿಕ್ಟ್ ಇದ್ದಾರೆ ಎಂದು ಆರೋಪಿಸಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಕೊಲೆ ಮಾಡಿರುವ ಮಗನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.