ಮೈಸೂರು:ಜಿಲ್ಲೆಯ ವರುಣ ಗ್ರಾಮದ ಹೊರವಲಯದ ಹೋಟೆಲ್ ಬಳಿ ನಡೆದ ಬರ್ಬರ ಹತ್ಯೆಗೆ ಇಡೀ ರಾಜ್ಯವೇ ಬೆಚ್ಚಿ ಬಿದ್ದಿದೆ. ಘಟನೆಗೆ ಹೆಣ್ಣಿನ ವಿಷಯಕ್ಕೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಕಾರ್ತಿಕ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಕೊಲೆಯಾಗಿರುವ ಕಾರ್ತಿಕ್ ಮೈಸೂರು ನಗರದ ಕ್ಯಾತಮಾರನಹಳ್ಳಿ ನಿವಾಸಿ ಎನ್ನಲಾಗಿದೆ.
ಬೈಕ್ ಹಾಗೂ ಕಾರಿನಲ್ಲಿ ಬಂದಿದ್ದ ಐವರು ಜನರ ತಂಡ ಈ ದೃಷ್ಕೃತ್ಯ ಎಸಗಿದೆ. ಭಾನುವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ವ್ಯಕ್ತಿಯನ್ನು ಕೊಲೆ ಮಾಡುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ಕುರಿತು ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರಕರಣದ ಕುರಿತು ಮೃತ ಕಾರ್ಮಿಕ್ ಸಂಬಂಧಿ ಪದ್ಮನಾಭನ್ ಮಾತನಾಡಿ, ಕಾರ್ತಿಕ್ ಸ್ನೇಹಿತನನ್ನು ನಂಬಿ ಕೊಲೆಯಾಗಿದ್ದಾನೆ ಎನ್ನಲಾಗಿದೆ. ಕಾರ್ತಿಕ್ ಮನೆಯಲ್ಲಿ ಮಲಗಿದ್ದ. ಆತನನ್ನು ಮಾತನಾಡುವುದಿದೆ ಎಂದು ಕರೆಯಿಸಿದ್ದಾರೆ. ರಾಜಿ ಮಾಡಿಕೊಳ್ಳುವುದಕ್ಕಾಗಿ ಆತನನ್ನು ಕರೆಯಿಸಿಕೊಂಡಿದ್ದಾರೆ. ಪ್ರವೀಣ್ ಹಾಗೂ ಇತರರು ಈ ಕೃತ್ಯ ಎಸಗಿದ್ದಾರೆ. ಈ ಹಿಂದೆ ಕಾರ್ತಿಕ್ ಹಾಗೂ ಪ್ರವೀಣ್ ಮಧ್ಯೆ ಕೂಡ ಗಲಾಟೆ ಆಗಿತ್ತು. ಆದರೆ, ಅದರ ಹಿಂದಿನ ಕಾರಣ ಗೊತ್ತಿಲ್ಲ. ಹಳೇ ದ್ವೇಷ ಇಟ್ಟುಕೊಂಡು ಪ್ರವೀಣ್ ಹತ್ಯೆ ಮಾಡಿದ್ದಾನೆ.
ಹಿಂದೆ ಲಕ್ಷ್ಮೀ ಎಂಬ ಹುಡುಗಿಯ ವಿಚಾರಕ್ಕೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಅಂದಿನಿಂದಲೂ ಪ್ರವೀಣ್ ಎಲ್ಲಿಯೂ ಕಾಣಿಸಿರಲಿಲ್ಲ. ಈಗ ಏಕಾಏಕಿ ರಾಜಿಗೆ ಕರೆದು ಕೊಲೆ ಮಾಡಿದ್ದಾರೆ. ಪ್ರವೀಣ್ ಜೊತೆ ಇನ್ನೂ ಅನೇಕರು ಇದ್ದಾರೆ. ಕನಕಗಿರಿ ಅಭಿ ಹುಡುಗರು ಇದ್ದರು ಅನ್ನುತ್ತಿದ್ದಾರೆ. ಕಾರ್ತಿಕ್ ಒಳ್ಳೆ ಹುಡುಗ, ಸಾಕಷ್ಟು ಸಹಾಯ ಮಾಡುತ್ತಿದ್ದ ವ್ಯಕ್ತಿ ಎಂದಿದ್ದಾರೆ.