ಮಂಡ್ಯ : ಮದ್ದೂರಿಗೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿಯನ್ನು ಜೆಡಿಎಸ್ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.
ಮದ್ದೂರಿನ ಟಿ.ಬಿ ವೃತ್ತದ ಬಳಿ ತೆರದ ವಾಹನದ ಮೇಲಿದ್ದ ನಿಖಿಲ್ ಗೆ ಪುಷ್ಪವೃಷ್ಟಿಗೈಯ್ಯಲಾಗಿದೆ. ಕ್ರೇನ್ ಮೂಲಕ ಬೃಹತ್ ಪೈನಾಪಲ್ ಹಾರ ಹಾಕಿ ಅಭಿಮಾನ ಮೆರೆಯಲಾಗಿದೆ. ಈ ವೇಳೆ ಜಾನಪದ ಕಲಾ ತಂಡಗಳೊಂದಿಗೆ ನಿಖಿಲ್ ಗೆ ಅದ್ದೂರಿ ಸ್ಚಾಗತ ಕೋರಲಾಯಿತು. ಬೈಕ್ ರ್ಯಾಲಿ ಮೂಲಕ ವೇದಿಕೆ ಕಾರ್ಯಕ್ರಮದತ್ತ ಮೆರವಣಿಗೆ ತೆರಳಿತು.