ಬೆಂಗಳೂರು: ನಾನು ಯುದ್ಧ ಬೇಡ ಅಂತಾ ಹೇಳಿದ್ದಕ್ಕೆ ದೊಡ್ಡ ಯುದ್ಧವೇ ನಡೆದಿತ್ತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಕದನ ವಿರಾಮದ ಬಗ್ಗೆ ಮಾತನಾಡಿದ ಅವರು, ಕದನ ವಿರಾಮದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಕದನ ವಿರಾಮ ಘೋಷಣೆಯಾದರೂ ಎಚ್ಚರಿಕೆಯಿಂದ ಇರಬೇಕು. ಭಯೋತ್ಪಾದನೆಯನ್ನು ನಿಗ್ರಹಿಸುವ ಕೆಲಸ ನಡೆಯಬೇಕು. ನಾವು ಯಾವಾಗಲೂ ಭಯೋತ್ಪಾದನೆಯ ವಿರುದ್ಧ ಇದ್ದವರು. ಭಯೋತ್ಪಾದನೆಯನ್ನು ಎಲ್ಲರೂ ಸೇರಿ ಮಟ್ಟ ಹಾಕಬೇಕು ಎಂದಿದ್ದಾರೆ.