1971….ಅವತ್ತು ಪಾಕಿಸ್ತಾನದ ಪ್ರಧಾನಿ ಯಾಹ್ಯಾ ಖಾನ್ ಭಾರತವನ್ನು ಕಬ್ಜಾ ಮಾಡುವ ಹುನ್ನಾರ ನಡೆಸಿದ್ದರು. ಈ ಕಂತ್ರಿ ಕೆಲಸಕ್ಕೆ ಚೀನಾ ಒಳಗಿಂದೊಳಗೇ ಕುಮ್ಮಕ್ಕು ನೀಡಿತ್ತು. ಆದರೆ ಈ ಸೂಕ್ಷ್ಮವನ್ನು ಗ್ರಹಿಸಿದ್ದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೊಡ್ಡದೊಂದು ಚೆಕ್ ಮೇಟ್ ಇಡಲು ಅಣಿಯಾಗಿದ್ದರು. ಶೇ. 80ರಷ್ಟು ಮಂದಿ ಬಾಂಗ್ಲಾ ಮಾತನಾಡುವ ಪೂರ್ವ ಪಾಕಿಸ್ತಾನದಲ್ಲಿ ಉರ್ದುವನ್ನು ರಾಷ್ಟ್ರ ಭಾಷೆಯನ್ನಾಗಿಸಲಾಯಿತು. ಇದರಿಂದ ಕೆರಳಿದ ಇಲ್ಲಿನ ಜನ ಪಾಕಿಸ್ತಾನದ ವಿರುದ್ಧ ದಂಗೆ ಎದ್ದಿದ್ದರು. ಮುಜಾಬಿರ್ ರೆಹಮಾನ್ ಸಾರಥ್ಯದಲ್ಲಿ ಬಾಂಗ್ಲಾ ಹೋರಾಟ ತಾರಕಕ್ಕೇರಿತ್ತು. ಇದನ್ನೇ ದಾಳವಾಗಿಸಿದ ಇಂದಿರಾ ಸ್ವತಂತ್ರ ಬಾಂಗ್ಲಾದೇಶವನ್ನು ಅಸ್ತಿತ್ವಕ್ಕೆ ತಂದಿದ್ದರು. ಅಖಂಡ ಪಾಕಿಸ್ತಾನವನ್ನು ಇಬ್ಬಾಗ ಮಾಡಿ ಹೊಸರಾಷ್ಟ್ರದ ಉದಯಕ್ಕೆ ಹರಿಕಾರರಾಗಿದ್ರು. ತನ್ನ ಹುಟ್ಟಿಗೆ ಕಾರಣವಾದ ಭಾರತವನ್ನೇ ಇದೀಗ ಈ ದೇಶ ಮರೆತತಂತಿದೆ. ಭಾರತದ ವಿರುದ್ಧವೇ ಹಗೆ ಕಾರೋ ರಣಹದ್ದಾಗಿ ಕುಟುಕುತ್ತಿದೆ.
ಬಾಂಗ್ಲಾದೇಶದ ಕ್ಯಾತೆಗೆ ಭಾರತದ ತಿರುಗೇಟು
ಚಿಕನ್ ನೆಕ್…ಭಾರತದ ಸಪ್ತ ಸಹೋದರಿಯರು ಅಂತಲೇ ಕರೆಸಿಕೊಳ್ಳೋ ಈಶಾನ್ಯ ರಾಜ್ಯಗಳ ಮೇಲೀಗ ಬಾಂಗ್ಲಾದೇಶ ವಕ್ರದೃಷ್ಟಿ ಬೀರಿದೆ. ಕೋಲ್ಕತ್ತಾ, ಅಸ್ಸಾಂ, ತ್ರಿಪುರಾ, ಬಾಂಗ್ಲಾದೇಶಕ್ಕೆ ಸೇರಿದ್ದು ಎನ್ನುವ ಕ್ಯಾತೆ ಶುರು ಮಾಡಿದೆ. ಅಲ್ಲಿನ ಪ್ರಧಾನಿ ಶೇಖ್ ಹಸೀನಾ ಪದಚ್ಯುತಿ ಬೆನ್ನಲ್ಲೇ ಗರಿಗೆದರಿರುವ ರಾಜಕೀಯ ಪಾಕಿಸ್ತಾನಿಗಳ ಕುಮ್ಮಕ್ಕಿನಿಂದ ಭಾರತದ ವಿರುದ್ಧ ವಿಷ ಕಾರುವಂತೆ ಮಾಡ್ತಿದೆ. ಆದ್ರೀಗ ಬಾಂಗ್ಲಾದೇಶದ ಮೇಲಿನ ಅವಲಂಬನೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಭಾರತದ ಮಹತ್ವಾಕಾಂಕ್ಷಿ ಕಲಾದನ್ ಕಾರಿಡಾರ್ ಯೋಜನೆಗೆ ವೇಗ ನೀಡಿದೆ.
ನಾಲ್ಕು ಪಥದ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ
ಬಾಂಗ್ಲಾದೇಶವನ್ನು ಬಗ್ಗುಬಡಿಯಲೆಂದೇ ಭಾರತವೀಗ ಕಲಾದನ್ ಕಾರಿಡಾರ್ ಗೆ ಮಿಂಚಿನ ವೇಗ ನೀಡಿದೆ. ಈ ಬಹುಮಾದರಿ ಸಾರಿಗೆ ವ್ಯವಸ್ಥೆ ಜಾರಿಯಾದರೆ ನೇರ ಮಯನ್ಮಾರ್ ನಿಂದ ವಿಶಾಖಪಟ್ಟಣಂವರೆಗಿನ ಸಮುದ್ರ ರಹದಾರಿ ಭಾರತದ ಪಾರಮ್ಯವಿರಲಿದೆ. ಈ ಮೂಲಕ ಬಾಂಗ್ಲಾ ಮೂಲಕ ಹಾದಿ ಬಳಸುತ್ತಿದ್ದ ಸರಕು ಸಾಗಣೆ ಮಾರ್ಗ ಬದಲಾಗಲಿದೆ. 166.8 ಕಿಲೋಮೀಟರ್ ನ ಹೊಸ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಸಮ್ಮತಿ ನೀಡಲಾಗಿದ್ದು. ನಾಲ್ಕು ಪಥಗಳ ಹೆದ್ದಾರಿ ಅಸ್ತಿತ್ವಕ್ಕೆ ಬರಲಿದೆ. ಈ ಗುಡ್ಡಗಾಡು ಹಾದಿಯಲ್ಲಿ ಇದೇ ಮೊದಲ ಬಾರಿ 4 ಪಥದ ರಸ್ತೆ ನಿರ್ಮಾಣವಾದಂತಾಗುತ್ತೆ. ಈಗಿರುವ 8.5 ಗಂಟೆಗಳ ಪ್ರಯಾಣದ ಸಮಯ ಹೊಸಮಾರ್ಗ ನಿರ್ಮಾಣವಾದ್ರೆ ಕೇವಲ 5 ಗಂಟೆಗೆ ತಗ್ಗಲಿದೆ. ಬರೋಬ್ಬರಿ 22.864 ಕೋಟಿಗಳ ಈ ಯೋಜನೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ.
ಸಪ್ತ ರಾಜ್ಯಗಳನ್ನು ದೆಹಲಿಯೊಂದಿಗೆ ಬೆಸೆದಿದ್ದ ಸಿಲಿಗುರಿ ಕಾರಿಡಾರ್
ಚಿಕನ್ ನೆಕ್, ಭಾರತದೊಂದಿಗೆ ಈ ಸಪ್ತ ರಾಜ್ಯಗಳ ಸಂಪರ್ಕ ಅಂತಾ ಇದ್ದರೆ ಅದಕ್ಕೆ ಇದೊಂದೇ ರಹದಾರಿ. ಕೇವಲ 20 ಕಿಲೋಮೀಟರ್ ನ ಈ ರಸ್ತೆಯನ್ನು ಬಾಂಗ್ಲಾದೇಶ ಕಬ್ಜಾ ಮಾಡಿದರೆ 7 ರಾಜ್ಯಗಳೊಂದಿಗಿನ ಭಾರತದ ಸಂಪರ್ಕ ಸೇತುವೆಯೇ ತುಂಡಾಗಿಬಿಡುತ್ತೆ. ಇದನ್ನು ಮನಗಂಡೇ ಇದೀಗ ಕಲಾದನ್ ಕಾರಿಡಾರ್ ಗೆ ಚಾಲನೆ ನೀಡಲಾಗಿದೆ. ಕೇವಲ ರಸ್ತೆಯಷ್ಟೇ ಅಲ್ಲಾ, ಸಮುದ್ರ ಮಾರ್ಗದಲ್ಲೂ ಈ ಕಾರಿಡಾರ್ ದೊಡ್ಡ ಕೊಡುಗೆ ನೀಡಲಿದೆ. ಕೋಲ್ಕತ್ತದಿಂದ ಮಯನ್ಮಾರಿನ ಸಿಟ್ಟೈ ಬಂದರನ್ನು ಸಂಪರ್ಕಿಸಲಾಗ್ತಿದೆ. ನದಿ ಮಾರ್ಗವಾಗಿ ನೋಡಿದರೆ ಸಿಟ್ಟೈನಿಂದ ಪಲೆಟ್ವಾವರೆಗೂ ಸಂಪರ್ಕ ಸಿಗಲಿದೆ. ಇನ್ನು ಹೆದ್ದಾರಿ ಮಿಜೋರಾಂ, ಅಸ್ಸಾಂ, ಮೇಘಾಲಯ ಮಾರ್ಗವಾಗಿ ಕೊಲ್ಕತ್ತ ತಲುಪಲಿದೆ. ಅಲ್ಲಿಗೆ ಬಾಂಗ್ಲಾದೇಶದ ಮೇಲಿನ ಅವಲಂಬನೆ ಸಂಪೂರ್ಣ ಕಟ್ ಆಗಲಿದೆ. ಈ ಮೂಲಕ ಭಾರತ ಈಶಾನ್ಯ ರಾಜ್ಯಗಳಲ್ಲಿ ನಿಜಕ್ಕೂ ಸಂಪರ್ಕ ಕ್ರಾಂತಿ ಮಾಡುವ ಮೂಲಕ ಸ್ವತಂತ್ರವಾಗಲಿದೆ. ಅಷ್ಟೇ ಅಲ್ಲಾ ಈ ಸಪ್ತ ರಾಜ್ಯಗಳ ಆರ್ಥಿಕ ಪ್ರಗತಿಗೂ ಈ ಕಾರಿಡಾರ್ ಬಹುದೊಡ್ಡ ಪಾಲು ನೀಡಲಿದೆ. ಹೀಗಾಗಿ ಕ್ಯಾತೆ ತೆಗೆದ ಬಾಂಗ್ಲಾದೇಶವನ್ನು ಈ ಕಾರಿಡಾರ್ ಸಂಪೂರ್ಣ ಬಗ್ಗು ಬಡೆಯಲಿದೆ.