ಮೂರು ದಿನಗಳ ರಾಜ್ಯ ಭೇಟಿಗಿಂದು ಸುರ್ಜೇವಾಲ ಆಗಮಿಸುತ್ತಿದ್ದಾರೆ. ಅದರಲ್ಲೂ ಬಹುಮತದ ಸರ್ಕಾರವಿದ್ದರೂ ನಮ್ಮ ಕೆಲಸಗಳು ಈ ಆಡಳಿತದಲ್ಲಿ ಆಗುತ್ತಿಲ್ಲ ಎನ್ನುವ ಅಪಸ್ವರ ಹಲವರಿಗಿದೆ.
ಅನುದಾನ ಬಿಡುಗಡೆಯಾಗದೆ ಕ್ಷೇತ್ರದ ಜನರಿಗೆ ಉತ್ತರ ನೀಡಲಾಗುತ್ತಿಲ್ಲ. ಅಂತಲೂ ಹಲವರು ಭಿನ್ನರಾಗ ತೆಗೆದಿದ್ದಾರೆ. ಇಂಥಾ 42 ಶಾಸಕರನ್ನು ಮೊದಲ ಹಂತದಲ್ಲಿ ಸುರ್ಜೇವಾಲಾ ಕರೆದು ಸವಾಲೋಚನೆ ನಡೆಸಲಿದ್ದಾರೆ. ಈ ಪೈಕಿ ಆಳಂದದ ಬಿ.ಆರ್. ಪಾಟೀಲ್, ಕಾಗವಾಡದ ರಾಜು ಕಾಗೆ, ಗೌರಿಬಿದನೂರಿನ ಪುಟ್ಟಸ್ವಾಮಿ ಗೌಡ, ಬಾಗೇಪಲ್ಲಿಯ ಎಸ್.ಎನ್. ಸುಬ್ಬಾರೆಡ್ಡಿ, ಚಿಕ್ಕಬಳ್ಳಾಪುರದ ಪ್ರದೀಪ್ ಈಶ್ವರ್, ಕೆಜಿಎಫ್ ನ ರೂಪಾ ಶಶಿಧರ್, ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಕೋಲಾರದ ಕೊತ್ತೂರು ಮಂಜುನಾಥ್ ಸೇರಿ 42 ಮಂದಿಗೆ ಬುಲಾವ್ ನೀಡಲಾಗಿದೆ.