ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಫ್ ಚಕ್ರಪಾಣಿ ಎಡವಟ್ಟುಗಳು ಬಯಲಾಗಿವೆ.
ಕೆಳ ಹಂತದ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಡಿಸಿಎಫ್ ವೈಫಲ್ಯವೇ ಈ ಘಟನೆಗಳಿಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.
ಚಕ್ರಪಾಣಿ ಟಾರ್ಚರ್ ಗೆ ಕೆಲವು ವಲಯ ಅರಣ್ಯಾಧಿಕಾರಿಗಳಿಗು ಬೇಸತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಹಲವು ಅಧಿಕಾರಿಗಳು ಬೇರೆಡೆ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದರು. ದಿನಗೂಲಿ ನೌಕರರು, ಕಾಡಂಚಿನ ಜನರ ಸಂಕಷ್ಟ ಕೇಳುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದರು ಎನ್ನಲಾಗಿದೆ. ವಾಚರ್ ಗಳಿಗೆ ಗುತ್ತಿಗೆದಾರನಿಂದ ಕಾಲಕಾಲಕ್ಕೆ ಸಂಬಳ ಕೊಡಿಸುವಲ್ಲಿ ವಿಫಲವಾಗಿದ್ದಾರೆ.
ಅರಣ್ಯ ಗಸ್ತಿನ ಮೇಲುಸ್ತುವಾರಿ ನಡೆಸದ ಬಗ್ಗೆ ಗಂಭೀರ ಆರೋಪಗಳು ಕೇಳಿ ಬಂದಿವೆ. ಮಡಿಕೇರಿ ಜಿಲ್ಲೆಯ ವಿರಾಜಪೇಟೆಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಚಕ್ರಪಾಣಿ ಸಸ್ಪೆಂಡ್ ಆಗಿದ್ದರು. ಆ ವೇಳೆ ಮಹದೇಶ್ವರ ವನ್ಯಧಾಮಕ್ಕೆ ಎಂಟ್ರಿ ಕೊಟ್ಟಿದ್ದರು. ಏನಾದರೂ ತೊಂದರೆಯಾದ ವೇಳೆ ಸಾರ್ವಜನಿಕರು ಕರೆ ಮಾಡಿದಾಗ ಸ್ಪಂದಿಸುವುದಿಲ್ಲ. ಅವರ ಇಂತಹ ಎಡವಟ್ಟಿನಿಂದಾಗಿ ಸಾಕಷ್ಟು ತೊಂದರೆಗಳಾಗುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.