ಬೆಂಗಳೂರು: ಬಿಜೆಪಿಯ ಕುರುಬ ಸಮುದಾಯದ ನಾಯಕರಿಂದ ಶನಿವಾರ ಸಭೆ ನಡೆದಿದೆ.
ಪಕ್ಷದಲ್ಲಿ ಕುರುಬ ಸಮುದಾಯಕ್ಕೆ ಮಾನ್ಯತೆ ನೀಡಬೇಕೆಂಬ ಉದ್ಧೇಶದಿಂದ ಸಭೆ ನಡೆಸಲಾಗಿದೆ ಎನ್ನಲಾಗಿದೆ. ಕುರುಬ ಸಮುದಾಯಕ್ಕೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನಗಳು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಕುರುಬ ಸಮುದಾಯಕ್ಕೆ ಗೌರವ ಹಾಗೂ ಮಾನ್ಯತೆ ನೀಡಬೇಕು. ಒಬಿಸಿ ವರ್ಗದ ನಾಯಕತ್ವ ಪರಿಗಣನೆ ಮಾಡಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು. ಈ ಸಭೆಯಲ್ಲಿ ಕುರುಬ ಸಮುದಾಯದ ನಾಯಕ ಕೆ.ಎಸ್. ಈಶ್ವರಪ್ಪ ಅವರನ್ನು ಮರಳಿ ಪಕ್ಷಕ್ಕೆ ಕರೆ ತರಬೇಕೆಂಬ ಒತ್ತಾಯವೂ ಕೇಳಿ ಬಂದಿತು.