ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರವಾಗಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರಗಳನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಆದರೆ, ನಾನು ಆ ಗೋಜಿಗೆ ಹೋಗಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರದ ಉಸಾಬರಿಯೇ ನನಗೆ ಬೇಡ ಎಂದಿದ್ದಾರೆ.
ನಾನು ಈ ಸಂಬಂಧ ಯಾರನ್ನು ಕಾಂಟಾಕ್ಟ್ ಮಾಡೋಕೆ ಹೋಗಿಲ್ಲ. ಬದಲಾವಣೆ ಜಂಜಾಟಕ್ಕೆ ನಾನು ಹೋಗುವುದಿಲ್ಲ. ನಾನು ಅಷ್ಟು ದೊಡ್ಡ ಲೀಡರ್ ಅಲ್ಲ. ನಾನು ನನ್ನ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದೇನೆ. ಪಕ್ಷದಲ್ಲಿ ಏನು ನಡೆಯುತ್ತದೆ ಎನ್ನುವುದರ ವಿಚಾರ ಮಾಡಲ್ಲ. ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿರಿಯರಿದ್ದಾರೆ. ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಸಮ್ಮತಿ ಸೂಚಿಸುತ್ತೇವೆ ಎಂದಿದ್ದಾರೆ.
ಮಾಜಿ ಸಿಎಂ ಮಗ ಎಂದು ವಿಜಯೇಂದ್ರಗೆ ರಾಜಾಧ್ಯಕ್ಷರನ್ನಾಗಿ ಮಾಡಿದ್ದಾರೆ. ವಯಸ್ಸಿನಲ್ಲಿ ನಾನು ಅವರಗಿಂತ ದೊಡ್ಡವ. ಆದರೂ ಹೈಕಮಾಂಡ್ ತೀರ್ಮಾನ ಒಪ್ಪುತ್ತೇವೆ ಎದಿದ್ದಾರೆ.